24.9 C
Udupi
Friday, March 21, 2025
spot_img
spot_img
HomeBlogಶಿವಮೊಗ್ಗ: ತಡೆ ಇದ್ದರೂ ಲೆಕ್ಕಿಸದೆ, ಅಬ್ಬಿ ಜಲಪಾತ ವೀಕ್ಷಣೆಗೆ ಇಳಿದ ತಂಡ, ಯುವಕ ನೀರುಪಾಲು

ಶಿವಮೊಗ್ಗ: ತಡೆ ಇದ್ದರೂ ಲೆಕ್ಕಿಸದೆ, ಅಬ್ಬಿ ಜಲಪಾತ ವೀಕ್ಷಣೆಗೆ ಇಳಿದ ತಂಡ, ಯುವಕ ನೀರುಪಾಲು

ಶಿವಮೊಗ್ಗ; ಜಿಲ್ಲೆಯ ಹೊಸನಗರ ತಾಲೂಕಿನ ಯಡೂರು ಸಮೀಪದ ಅಬ್ಬಿ ಜಲಪಾತಕ್ಕೆ ,ಬೆಂಗಳೂರಿನಿಂದ 12 ಜನ ಯುವಕರ ತಂಡ ವೀಕ್ಷಣೆಗೆ ಬಂದಿದ್ದು ಸೆಲ್ಫಿ ತೆಗೆಯುವ ಸಂದರ್ಭದಲ್ಲಿ ಯುವಕನೊಬ್ಬ ನೀರು ಪಾಲಾದ ಘಟನೆ ವರದಿಯಾಗಿದೆ.

ಬೆಂಗಳೂರಿನ ವಿನೋದ್ (26) ತನ್ನ ತಂಡದೊಂದಿಗೆ ಜಲಪಾತ ವೀಕ್ಷಣೆಗೆ ಬಂದಿದ್ದು, ಭಾರಿ ಮಳೆಯ ಹಿನ್ನೆಲೆ ಯಾರೂ ಜಲಪಾತಕ್ಕೆ ಹೋಗದಂತೆ ಕಂದಕ ಹೊಡೆಯಲಾಗಿದ್ದರೂ, ತಂಡ ಅದನ್ನು ಲೆಕ್ಕಿಸದೆ ನೀರಿಗೆ ಇಳಿದಿದ್ದು, ಕಾಲು ಜಾರಿದ ಹಿನ್ನೆಲೆ ಇದೀಗ ವಿನೋದ್ ನೀರು ಪಾಲಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಪೊಲೀಸರು ಭೇಟಿ ನೀಡಿದ್ದು ಮೃತ ದೇಹಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page