
ಕಾರ್ಕಳದ ಪ್ರತಿಷ್ಟಿತ ಸಮಾಜ ಸೇವಾ ಸಂಸ್ಥೆಯಾದ ಯುವಶಕ್ತಿ ಯೂತ್ ಕ್ಲಬ್ ಕಾಳಿಕಾಂಬ, ಕರಿಯಕಲ್ಲು ಇದರ ಮಹಾಸಭೆಯು ಜರಗಿತು. 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ವೆಂಕಟೇಶ್ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಸುಪ್ರೀತ್ ಅಂಚನ್ ನೆಕ್ಲಾಜೆ ಗುತ್ತು, ಕಾರ್ಯದರ್ಶಿ ರಕ್ಷಿತ್ ಕೋಟ್ಯಾನ್ ನೆಕ್ಲಾಜೆಗುತ್ತು, ಜತೆ ಕಾರ್ಯದರ್ಶಿ ವಿಶ್ವಾಸ್ ರಾವ್, ಕ್ರೀಡಾ ಕಾರ್ಯದರ್ಶಿ ಸಾಯಿಕಿರಣ್ ಕೋಟ್ಯಾನ್, ಜತೆ ಕ್ರೀಡಾ ಕಾರ್ಯದರ್ಶಿ ಗಣೇಶ್, ಕೋಶಾಧಿಕಾರಿ ಅನಿಲ್ ಕೋಟ್ಯಾನ್, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಹರೀಶ್ ಮೊಯ್ಲಿ, ವಿನೋದ್ ಕೋಟ್ಯಾನ್, ಸಂಘಟನಾ ಕಾರ್ಯದರ್ಶಿಗಳಾಗಿ ರಮಿತ್ ಕೋಟ್ಯಾನ್ ನೆಕ್ಲಾಜೆಗುತ್ತು, ಶರತ್ ಶೆಟ್ಟಿ, ನಿಶಾನ್ ಬಂಗೇರ ಪದಾಧಿಕಾರಿಗಳಾಗಿ ಆಯ್ಕೆಯಾದರು.




























