
ಜೂ 22 ಶನಿವಾರದಂದು ಸ.ಹಿ.ಪ್ರಾ ಶಾಲೆ ದುರ್ಗಾತೆಳ್ಳಾರಿನಲ್ಲಿ ದಾನಿಗಳಿಗೆ ಸನ್ಮಾನ ಮತ್ತು ಕಲಿಕೋಪಕರಣಗಳ ವಿತರಣಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ 35,000 ರೂ ಮೌಲ್ಯದ ಕಲಿಕಾ ಸಾಮಾಗ್ರಿಗಳನ್ನು ಕೊಡುಗೆಯಾಗಿ ನೀಡಿದ ಸಂತೋಷ್ ಶೆಟ್ಟಿ ಅಲಿಂಬೆಟ್ಟು.33,000 ರೂ ಮೊತ್ತದ ಕಲಿಕಾ ಸಾಮಾಗ್ರಿಗಳನ್ನು ನೀಡಿದ ಅರವಿಂದ ಡಿ ಸೋಜಾ, 30 ವಿದ್ಯಾರ್ಥಿಗಳಿಗೆ ನೋಟ್ ಬುಕ್ಸ್ ಮತ್ತು ಕೊಡೆಗಳನ್ನು ನೀಡಿದ ಅಮ್ಮ ಟ್ರಸ್ಟ್ ನ ಅವಿನಾಶ್ ಶೆಟ್ಟಿ ಇವರುಗಳನ್ನು ಸನ್ಮಾನಿಸಲಾಯಿತು. ಅಲ್ಲದೆ ಶಾಲಾ ಮಕ್ಕಳಿಗೆ ಈ ಸಾಲಿಗೆ ಕೊಡೆ,ಸಮವಸ್ತ್ರ, ಗುರುತಿನ ಕಾರ್ಡ್,ಮರದ ಕಪಾಟು ಗಳನ್ನು ಕೊಡುಗೆಯಾಗಿ ನೀಡಿದ ನಿವೃತ್ತ ಶಿಕ್ಷಕಿ ಪ್ರೇಮಾ, ರಮಾ ದಾತೆ,ರೋಹನ್ ಶರ್ಮ,ಕೌಸರ್ ಬಾನು,ಝೀನತ್ ಬಾನು,ರೇಷ್ಮಾ ಬಾನು,ಇವರುಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ದೇವಕಿ,ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ನಾಯಕ್,sdmc ಅಧ್ಯಕ್ಷರಾದ ರಮಾನಂದ ಪೂಜಾರಿ,ಕಟ್ಟಡ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷರಾದ ಕೃಷ್ಣ ಭಟ್ ಬಲಾಜೆ,ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಕೆ.ಕೃಷ್ಣ,ಶಾಲಾ ಮುಖ್ಯೋಪಾಧ್ಯಾಯರಾದ ಪ್ರೇಮಲತಾ, SDMC ಉಪಾಧ್ಯಕ್ಷರಾದ ಶಾಹೀನ್ ಬಾನು ಉಪಸ್ಥಿತರಿದ್ದರು.SDMC ಸದಸ್ಯರು, ಪೋಷಕರು, ಶಿಕ್ಷಕವೃಂದ ಮತ್ತು ವಿದ್ಯಾರ್ಥಿಗಳು ಭಾಗಿಯಾದರು.