
ಬಜಗೋಳಿ:ಜ್ವಾಲಿ ಬಾಯ್ಸ್ ಬಜಗೋಳಿ ಇದರ ನೇತೃತ್ವದಲ್ಲಿ ಸಮಾನ ಮನಸ್ಕ ಸ್ನೇಹಿತರ ಸಹಕಾರದಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಜಗೋಳಿ ಇದರ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಹಾಗೂ ಲೇಖನಿ ಸಾಮಾಗ್ರಿ ಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಡಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೃತಿ.ಡಿ. ಅತಿಕಾರಿ ಯವರು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಯುವ ನ್ಯಾಯವಾದಿಗಳಾದ ಕೆ.ವಿನೀತ್ ಕುಮಾರ್, ಯುವ ಉದ್ಯಮಿಗಳಾದ ಸುಶಾಂತ್ ಬಜಗೋಳಿ, ಸಂತೋಷ್ ಪೂಜಾರಿ ಮಾಳ, ಸಮಾಜಸೇವಕಿ ಗಾಯತ್ರಿ ಪ್ರಭು, ಗ್ರಾಮ ಪಂಚಾಯತ್ ಸದಸ್ಯರಾದ ರಜತ್ ರಾಮ್ ಮೋಹನ್, ರೇಖಾ ಭಂಡಾರಿ,ಎಸ್.ಡಿ.ಎಂ.ಸಿ ಅಧ್ಯಕ್ಷರಾದ ನಿತೇಶ್ ಶೆಟ್ಟಿಮುಖ್ಯಶಿಕ್ಷಕಿ ಲಿಲ್ಲಿ ಡಿಸೋಜಾ, ಹಾಗೂ ಜ್ವಾಲಿ ಬಾಯ್ಸ್ ಬಜಗೋಳಿ ಇದರ ಸದಸ್ಯರು ಉಪಸ್ಥಿತರಿದ್ದರು.
ಶಿಕ್ಷಕಿ ಜ್ಯೋತಿ ಯವರು ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕಿ ಶೋಭಾ ರವರು ಧನ್ಯವಾದವಿತ್ತರು.
