“ಆದರ್ಶ ವಿದ್ಯಾರ್ಥಿಗಳೇ ಶಿಕ್ಷಕರ ಸಂಪತ್ತು – ಸುಂದರ್ ಸೇರ್ವೆಗಾರ್”.

ಎಣ್ಣೆ ಹೊಳೆ : ವಿದ್ಯಾರ್ಥಿಗಳು ಕೇವಲ ವಿದ್ಯಾರ್ಥಿ ಜೀವನಕ್ಕಷ್ಟೇ ಸೀಮಿತರಲ್ಲ . ಶಿಕ್ಷಕರಿಗೆ ಎಂದೆಂದಿಗೂ ಮುದ್ದು ಮಕ್ಕಳೇ,ನಾವು ವೃತ್ತಿ ಬದುಕಿನಿಂದ ನಿವೃತ್ತಿ ಹೊಂದಿದರೂ ನಮ್ಮ ವಿದ್ಯಾರ್ಥಿಗಳು ನಮ್ಮನ್ನು ಶಿಕ್ಷಕರಂದೇ ಸಂಭೋದಿಸುತ್ತಾರೆ, ಇದಕ್ಕಿಂತ ಮಿಗಿಲು ನಮಗೆ ಮತ್ತೇನಿಲ್ಲ ಎಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಣ್ಣೆ ಹೊಳೆಯಲ್ಲಿ ಭಾನುವಾರ ನಡೆದ 1998 – 99ರ ಬ್ಯಾಚ್ ನಲ್ಲಿದ್ದ ಪೂರ್ವ ವಿದ್ಯಾರ್ಥಿಗಳು ನಡೆಸಿದ, ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಸುಂದರ ಸೆರ್ವೆಗಾರ್ ಅವರು ಮಾತನಾಡಿದರು.
ನಾವು ಹೆತ್ತ ಮಕ್ಕಳಷ್ಟೇ ನಮ್ಮ ಮಕ್ಕಳಲ್ಲ,ನಮ್ಮ ವಿದ್ಯಾರ್ಥಿಗಳೆಲ್ಲರೂ ನಮ್ಮ ಮಕ್ಕಳೇ, ತಪ್ಪು ಮಾಡಿದಾಗ ಶಿಕ್ಷಿಸಿ ಬುದ್ಧಿ ಹೇಳಿರಬಹುದು, ಆದರೆ ಶಿಕ್ಷೆ ನೀಡಲೇಬೇಕೆಂಬ ಉದ್ದೇಶದಿಂದ ಎಂದಿಗೂ ಶಿಕ್ಷಿಸಲಾರೆವು,ನಮ್ಮ ವಿದ್ಯಾರ್ಥಿಗಳನ್ನು ಭವಿಷ್ಯದಲ್ಲಿ ಮತ್ಯಾರು ಶಿಕ್ಷಿಸದ ರೀತಿಯ ಶಿಸ್ತಿನ ಸಿಪಾಯಿಗಳಾಗಬೇಕೆಂಬ ಉದ್ದೇಶವಷ್ಟೇ ನಮ್ಮದು ಎಂದು ಮತ್ತೋರ್ವ ಶಿಕ್ಷಕರಾದ ಸದಾನಂದ ನಾಯಕ್ ಅಭಿಪ್ರಾಯಪಟ್ಟರು.
ಹಿರಿಯ ಶಿಕ್ಷಕರಾದ ಮಾಲತಿ ರಾವ್, ಸುಂದರಿ ಪೂಜಾರಿ, ವಸಂತಿ ಶೆಟ್ಟಿ, ಗೀತಾ ಭಟ್, ವೆಂಕಟರಮಣ ಉಪಾಧ್ಯಾಯರು,ಶಾಂತಿ, ರಮಣಿ,ಜ್ಯೋತಿ, ಉಮಾ ಶಂಕರ್, ವಿದ್ಯಾರ್ಥಿಗಳಿಗೆ ಶುಭ ಹಾರೈಸುತ್ತಾ ಭಾವುಕರಾದರು.
ವಿದೇಶದಲ್ಲಿ ಕರ್ತವ್ಯದಲ್ಲಿದ್ದು ಈ ಕಾರ್ಯಕ್ರಮಕ್ಕಾಗಿ ಆಗಮಿಸಿ ಆತ್ಮೀಯರೆಲ್ಲರಿಗೂ ವಿಶೇಷ ಉಡುಗೊರೆಗಳನ್ನು ತಂದು ಪರ್ವಾಜ್ ಎಣ್ಣೆಹೊಳೆ ಜೊತೆಯಾದರೆ, ಅವರೊಂದಿಗೆ ವಿದೇಶದಿಂದ ನಿತ್ಯಾನಂದ, ಗಫೂರ್ ಮನ್ಸೂರ್ , ಹಕಿಮ್, ಕಿರಣ್ ಕುಮಾರ್ ಸಾಥ್ ನೀಡಿದರು.ಹಾಗೂ ಎಲ್ಲಾ ಪೂರ್ವ ವಿದ್ಯಾರ್ಥಿಗಳು ಜೊತೆಗಿದ್ದರು.
ಇದೇ ಸಂದರ್ಭದಲ್ಲಿ ನಮ್ಮನ್ನಗಲಿದ ಶಿಕ್ಷಕರುಗಳಾದ ಸುಂದರ ಪೂಜಾರಿ, ದಿವಾಕರ್, ಹಸನಬ್ಬ ಎಣ್ಣೆಹೊಳೆ, ಸುಂದರ್ ನಾಯ್ಕ್ ಇವರನ್ನು ಸ್ಮರಿಸಲಾಯಿತು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲ ಶಿಕ್ಷಕರುಗಳನ್ನು ವಿಶೇಷವಾಗಿ ಗೌರವಿಸಲಾಯಿತು, ಉಟೋಪಚಾರದ ನಂತರ ಶಿಕ್ಷಕರೆಲ್ಲರನ್ನು ಅವರವರ ಮನೆಗೆ ಬೀಳ್ಕೊಟ್ಟು ವಿದ್ಯಾರ್ಥಿಗಳು ವಿವಿಧ ಮನರಂಜನ ಆಟೋಟ ಸ್ಪರ್ಧೆಗಳಲ್ಲಿ ತೊಡಗಿಕೊಂಡು, ವಿಜೇತರಿಗೆ ಬಹುಮಾನ ವಿತರಿಸಲಾಯಿತು,ಕಾರ್ಯಕ್ರಮದಲ್ಲಿ ಅನಿಲ್ ಕುಮಾರ್ ಪ್ರಾರ್ಥಿಸಿ ಪ್ರಿಯದರ್ಶಿನಿ ಸ್ವಾಗತಿಸಿ ಜಯಂತಿ ನಾಯಕ್ ಪ್ರಾಸ್ತಾವಿಸಿ ಸುಕುಮಾರ್ ಶೆಟ್ಟಿ, ಧನ್ಯವಾದ ಸಮರ್ಪಿಸಿ ರೇಷ್ಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.