
ಆಗ್ರ: ಉತ್ತರ ಪ್ರದೇಶದ ಆಗ್ರಾದಲ್ಲಿ ಮಹಿಳೆಯೊಬ್ಬಳು ತನ್ನ ಗಂಡ ತನಗೆ 5 ರೂಪಾಯಿ ಕುರ್ಕುರೆ ಪ್ಯಾಕೆಟ್ ತಂದಿಲ್ಲ ಅನ್ನೋ ಕಾರಣಕ್ಕೆ ಡಿವೋರ್ಸ್ ಕೇಳಿದ ಘಟನೆ ನಡೆದಿದೆ.
ಆಗ್ರಾದ ದಂಪತಿ ಒಂದು ವರ್ಷದ ಹಿಂದೆ ಮದುವೆಯಾಗಿದ್ದಾರೆ. ನೂತನ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳೇನು ಇರಲಿಲ್ಲ. ಪತ್ನಿಗೆ ಹುರಿದ ತಿನಿಸುಗಳೆಂದರೆ ಪಂಚಪ್ರಾಣವಾಗಿದ್ದು ಹೀಗಾಗಿ ರೂ. 5 ಕುರ್ ಕುರೆ ಪ್ಯಾಕೆಟ್ ತರುವಂತೆ ಒಂದೆಡೆರು ಬಾರಿ ಗಂಡನಿಗೆ ಸೂಚಿಸಿದ್ದಾಳೆ. ಆದರೆ ಗಂಡ ಮರೆತೇ ಹೋಗಿದ್ದಾನೆ.
ಆರಂಭದಲ್ಲೇ ಗಂಡ ನೆನಪಿನಲ್ಲಿಟ್ಟು ಕುರ್ಕುರೆ ತಂದುಕೊಡುತ್ತಿದ್ದ. 6 ತಿಂಗಳ ಬಳಿಕ ಪತಿಗೆ ಕೆಲಸದಲ್ಲಿ ಜವಾಬ್ದಾರಿ ಹೆಚ್ಚಾದ ಕಾರಣ ತಿರುಗಾಟ, ಸುತ್ತಾಟಕ್ಕೆ ಬ್ರೇಕ್ ಬಿದ್ದು ಕುರ್ಕುರೆ ತರುತ್ತಿದ್ದ.
ಆದರೆ ಗಂಡನಿಗೆ ಪ್ರತಿ ದಿನ ಕುರ್ಕುರೆ ತರಲು ಮರೆತೇ ಹೋಗುತ್ತಿದೆ. ಒಂದೆರೆಡು ಬಾರಿ ಸೂಚಿಸಿದ ಪತ್ನಿ ಸಿಡಿಮಿಡಿಗೊಂಡಿದ್ದಾಳೆ. 5 ರೂಪಾಯಿ ಕುರ್ಕುರೆ ಪ್ಯಾಕೆಟ್ ತರದ ಗಂಡನ ವಿರುದ್ದ ಸೇಡು ತೀರಿಸಿಕೊಳ್ಳಲು ನಿರ್ಧರಿಸಿ ಮುನಿಸಿಕೊಂಡ ಪತ್ನಿ ನೇರವಾಗಿ ತವರು ಮನೆಗೆ ತೆರಳಿದ್ದಾಳೆ.
ಪತಿ ನನ್ನನ್ನು ನಿರ್ಲಕ್ಷಿಸುತ್ತಿದ್ದಾನೆ ಎಂದು ಹೇಳಿ ತವರು ಮನೆಯಲ್ಲೇ ಉಳಿದುಕೊಂಡಿದ್ದಾಳೆ. ಇತ್ತ ಪತಿ ಫೋನ್ ಮೂಲಕ ಮನವೊಲಿಸುವ ಪ್ರಯತ್ನ ಮಾಡಿದ್ದರೂ ಪ್ರಯೋಜನವಾಗಿಲ್ಲ. 2 ತಿಂಗಳ ತವರಿನಲ್ಲೇ ಉಳಿದ ಪತ್ನಿ, ಬಳಿಕ ಡಿವೋರ್ಸ್ಗೆ ಅರ್ಜಿ ಹಾಕಿದ್ದಾಳೆ. ಆದರೆ ಈಕೆಯ ಡಿವೋರ್ಸ್ನಲ್ಲಿ ನೀಡಿದ ಕಾರಣ ನೋಡಿದ ವಕೀಲು ಕೌನ್ಸಲಿಂಗ್ ಅಧಿಕಾರಿಗಳ ಬಳಿ ಕಳುಹಿಸಿದ್ದಾರೆ.
ಆಗ್ರಾದ ಕೌನ್ಸಿಲಿಂಗ್ ಅದಿಕಾರಿ ಡಾ. ಸತೀಶ್ ಖಿರ್ವಾರ್, ಪತಿ ಹಾಗೂ ಪತ್ನಿ ಇಬ್ಬರನ್ನು ಕರೆಸಿದ ಆಪ್ತ ಸಮಾಲೋಚನೆ ನಡೆಸಿದ್ದಾರೆ. ಪತ್ನಿಯ 5 ರೂಪಾಯಿ ಕುರ್ಕುರೆ ಮಾತು ಕೇಳಿ ಅಧಿಕಾರಿಗಲು ಸುಸ್ತಾಗಿದ್ದಾರೆ. 6 ತಿಂಗಳಿನಿಂದ ಪತ್ನಿಯ ವರ್ತನೆ ಬದಲಾಗಿದೆ. ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಪ್ರತಿ ದಿನ 5 ರೂಪಾಯಿ ಕುುರ್ಕುರೆ ತರಲು ಹೇಳಿದರೂ ಒಂದು ದಿನವೂ ತರುತ್ತಿಲ್ಲ. ಅಸಡ್ಡೆ, ನಿರ್ಲಕ್ಷ್ಯದಲ್ಲಿ ಜೀವನ ನಡೆಸಲು ಸಾಧ್ಯವಿಲ್ಲ ಎಂದ ಪತ್ನಿ ಆರೋಪಿಸಿದ್ದಾಳೆ