ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡದಿಂದ ,ಮಾದರಿ ಕಾರ್ಯ

ನಗರದ ಹಳೆಯ ಬಾವಿಯ ಸ್ವಚ್ಛ ಮಾಡುವ ಸದುದ್ದೇಶದಿಂದ, ಬಾವಿಯ ಸುತ್ತಮುತ್ತ ಬೆಳೆದಿರುವ ಗಿಡಗಂಟಿ ತೆರವುಗೊಳಿಸಿ, ಬಾವಿಯ ನೀರಲ್ಲಿ ಬಿದ್ದಿರುವ ಕಸಕಡ್ಡಿ ಸ್ವಚ್ಛಗೊಳಿಸಿ, ನಗರದ ಜನರು ಮತ್ತೆ ಬಾವಿ ನೀರು ಉಪಯೋಗಿಸುವಂತೆ ವ್ಯವಸ್ಥೆ ಮಾಡಬೇಕು ಎಂದು ನಿರ್ಧರಿಸಿದ ಸ್ವಚ್ಛ ಕಾರ್ಕಳ ಬ್ರಿಗೇಡ್, ದಿನಾಂಕ 22 ಮಾರ್ಚ್ 2026 ರ ಭಾನುವಾರ ಬೆಳಗ್ಗೆ 6.30 ಯಿಂದ 8.30 ವರೆಗೆ, ಅನಂತಶಯನ ದೇವಳದ ಬಳಿ ಮತ್ತು ಮಾರ್ಕೆಟ್ ರಸ್ತೆಯ ಬಳಿ ಇರುವ ಸರಕಾರಿ ತೆರೆದ ಬಾವಿ ಹಾಗೂ ಅದರ ಸುತ್ತಮುತ್ತಲ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಸ್ವಚ್ಛ ಕಾರ್ಕಳ ಬ್ರಿಗೇಡ್ ನ ಕಾರ್ಯಕರ್ತರು ಬಾವಿಗೆ ಇಳಿದು ಬಾವಿಯಲ್ಲಿ ತುಂಬಿದ್ದ ಕಸಕಡ್ಡಿಗಳನ್ನು, ಸಣ್ಣ ಪುಟ್ಟ ಗಿಡಗಂಟಿಗಳನ್ನು ಕಿತ್ತು ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆಗೆದು ಸ್ವಚ್ಛ ಮಾಡಲಾಯಿತು.
ನಿಟ್ಟೆ ಕಾಲೇಜಿನ ವಿದ್ಯಾರ್ಥಿಗಳು, ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡದೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಕೂಡಿದ್ದರು.
ಬಾವಿಗಳ ಹೊರಗೆ ಸುತ್ತಮುತ್ತಲು ತುಂಬಿದ್ದ ಕಸಕಡ್ಡಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆಗೆದು ಸ್ವಚ್ಛ ಮಾಡಿ ಬಾವಿಯ ಹೊರಗಿನ ಗೋಡೆಗಳಿಗೆ ಹಳದಿ ಬಣ್ಣದ ಪೈಂಟ್ ಕೊಡಲಾಯಿತು.
ಸುಮಾರು 35ಕ್ಕೂ ಅಧಿಕ ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು.
ಕಾರ್ಕಳದ ಅಗ್ನಿಶಾಮಕ ಠಾಣೆಯವರು ಬಾವಿಗೆ ಇಳಿಯಲು ಸಹಕಾರಿಯಾಗಿ ಹಗ್ಗ ಕೊಟ್ಟು ಸಹಕರಿಸಿದರು.






















































































