
ಕಾರ್ಕಳ: ನಿವೃತ್ತ ಪೋಲೀಸ್ ಅಧಿಕಾರಿ ಪಡುಬಿದ್ರಿ ಶ್ರೀ ಬಾಲಕೃಷ್ಣ ರಾವ್ ಮತ್ತು ಅವರ ಮಿತ್ರರ ದಿನೇಶ್ ರಾವ್ ಕಾಮಾಕ್ಷಿಪಾಳ್ಯ ಬೆಂಗಳೂರು ಇವರ ಸಹಕಾರದಲ್ಲಿ ಕಾರ್ಕಳ ಕುಕ್ಕುಂದೂರು ಅಯಪ್ಪನಗರ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ಸುಮಾರು 100 ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ, ಮುಖ್ಯ ಅಥಿತಿಯಾಗಿ ಭಾಗವಹಿಸಿದ ಕಾರ್ಕಳ ಪುರಸಭಾ ಸದಸ್ಯ, ಕಾಂಗ್ರೇಸ್ ಮುಖಂಡರಾದ ಶುಭದರಾವ್ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲೂ ಒಂದೊಂದು ಪ್ರತಿಭೆ ಅಡಗಿದೆ ಶಿಕ್ಷಕರು ಆ ಪ್ರತಿಭೆಯನ್ನು ಗುರುತಿಸುವಲ್ಲಿ ಆಸಕ್ತಿವಹಿಸಿದರೆ ನಮ್ಮ ಪ್ರತಿಭೆಗಳು ದೇಶದ ಸಂಪತ್ತಾಗಿ ಬೆಳೆಯುತ್ತವೆ, ವಿದ್ಯಾರ್ಥಿಗಳಿಗೆ ಸರಕಾರದಿಂದ ಅನೇಕ ಸವಲತ್ತುಗಳು ಘೋಷಣೆಯಾದರೂ ಕೆಲವರಿಗೆ ಅದು ಸರಿಯಾಗಿ ತಲುಪುತ್ತಿಲ್ಲ, ಸವಲತ್ತು ವಂಚಿತ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ಅಗತ್ಯವಿದೆ ಇಂತಹ ದಾನಿಗಳಿಂದ ಇದು ಸಾದ್ಯ ಅವರ ಸಹಕಾರವನ್ನು ಸದಾ ಸ್ಮರಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಹೇಮಂತ್ ಆಚಾರ್ಯ, ಕುಮಾರಿ ಮಿಷಾ ರಾವ್, ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.














