
ಕಾರ್ಕಳ: ಅಜೆಕಾರು ವ್ಯವಸಾಯ ಸಹಕಾರ ಸಂಘದ ಚುನಾವಣೆಯಲ್ಲಿ, ಕಾಂಗ್ರೆಸ್ ಗೆ ಭಾರಿ ಮುಖಬಂಗವಾಗಿದೆ. ಬಿಜೆಪಿ ಜಯಭೇರಿ ಬಾರಿಸಿದ್ದು ಸತತ ಮೂರನೇ ಬಾರಿಗೆ ಅಧಿಕಾರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
12 ಕಾಂಗ್ರೆಸ್ ಬೆಂಬಲಿತರು ಸ್ಪರ್ಧಿಸಿದ್ದ12 ಸ್ಥಾನಗಳಲ್ಲಿ ಪರಾಭವಗೊಂಡು ಗೊಂಡಿದ್ದು ಬಿಜೆಪಿ ಬೆಂಬಲಿತರು ಚುನಾವಣೆಯಲ್ಲಿ ಮತಗಳಿಕೆಯಲ್ಲಿ ಗೆಲುವನ್ನು ಸಾಧಿಸಿದರು.
ಅವಿರೋಧ ಆಯ್ಕೆ ಪ್ರಸ್ತಾಪ ದಲ್ಲಿ ತೊಡಕುಂಟಾದ ಹಿನ್ನೆಲೆಯಲ್ಲಿ ಚುನಾವಣೆ ಮೂಲಕ ಅಯ್ಕೆ ಮಾಡಲಾಗಿದೆ. ಅದರಲ್ಲೂ 12 ನಿರ್ದೇಶಕ ಮಂಡಳಿಯಲ್ಲಿಯು ಬಿಜೆಪಿ ಬೆಂಬಲಿತರೆ ಗೆಲುವುಸಾಧಿಸಿದ್ದಾರೆ.
ಬಿಜೆಪಿ ಸಾಮಾನ್ಯ ವರ್ಗದಿಂದ ಶಾಂತಿರಾಜ್ ಜೈನ್ 704 ,ಅರುಣ್ ಕುಮಾರ್ ಹೆಗ್ಡೆ 680, ದಿನೇಶ್ ನಾಯಕ್ 647, ಬಾಲಕೃಷ್ಣ ಪಿ 672, ರವೀಂದ್ರ ಪಿ 657 ಲಕ್ಷ್ಮಣ ವಾಗ್ಳೆ 658, ಮತಗಳನ್ನು ಪಡೆದರೆ, ಮಹಿಳಾ ಮೀಸಲಾತಿಯಲ್ಲಿ ಬಿಜೆಪಿ ಬೆಂಬಲಿತ ಜಲಜ ಶೆಟ್ಟಿ 783, ವಿಜೇತಾ ಪೈ 744 ಮತಗಳನ್ನು ಪಡೆದು ಜಯ ಸಾಧಿಸಿದ್ದಾರೆ.
ಹಿಂದುಳಿದ ವರ್ಗ ಎ ಮೀಸಲಾತಿ ಕ್ಷೇತ್ರದಿಂದ ಸತೀಶ್ ಪೂಜಾರಿ 757 ಮತಗಳು, ಹಿಂದುಳಿದ ವರ್ಗ ಬಿ ಮೀಸಲು ಕ್ಷೇತ್ರದಿಂದ ಪ್ರಶಾಂತ ಶೆಟ್ಟಿ 773 ಮತಗಳು, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ರಾಕೇಶ್ ನಾಯ್ಕ್ 785 ಮತಗಳು ,ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ರಾಘವೇಂದ್ರ 782 ಮತಗಳು ಒಟ್ಟಾರೆಯಾಗಿ ಬಿಜೆಪಿ ಮೂರನೇ ಬಾರಿಗೆ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದರ ಮೂಲಕ ಜಯಭೇರಿ ಬಾರಿಸಿದೆ.



















