
ಹಾವೇರಿ: ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಬುಧವಾರ ಮೆಡಿಕಲ್ ಕಾಲೇಜು ಉದ್ಘಾಟನೆ ಸಂಬಂಧ ಸಭೆಯಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಕೋವಿಡ್ ವ್ಯಾಕ್ಸಿನ್ ದುಷ್ಪರಿಣಾಮದಿಂದ ಹೃದಯಘಾತಗಳು ಸಂಭವಿಸಿಲ್ಲ, ತನಿಖೆ ಮಾಡಿಸಿ ವರದಿ ನೀಡಿದ್ದು ಈ ಕುರಿತು ಜನರಿಗೆ ತಪ್ಪು ಸಂದೇಶ ಹೋಗಿದೆ ಎಂದು ಹೇಳಿದ್ದಾರೆ.
“ಹೃದಯಘಾತದಿಂದ ಯುವಜನರ ಸಾವು ವ್ಯಾಕ್ಸೀನ್ ದುಷ್ಪರಿಣಾಮದಿಂದ ಸಂಭವಿಸಿಲ್ಲ. ಕಳೆದ ಆರು ತಿಂಗಳಲ್ಲಿ ಮರಣಗಳಲ್ಲಿ ಹೆಚ್ಚಳವಾಗಿಲ್ಲ. ಬರುವ ದಿನಗಳಲ್ಲಿ ಹಾವೇರಿಗೂ ಹೃದಯ ರೋಗ ತಜ್ಞರನ್ನು ಜೊತೆಗೆ ಎಂಆರ್ಐ ಸ್ಕ್ಯಾನ್ ಸೆಂಟರ್ ಅನ್ನು ಆದಷ್ಟು ಶೀಘ್ರವೇ ಓಪನ್ ಮಾಡಲಾಗುವುದು” ಎಂದು ತಿಳಿಸಿದರು.






















































