
ಕಾರ್ಕಳ: ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ಜೂನ್ 3ರಂದು ಬಾಲ ಮಂದಿರದಿಂದ 8ನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳನ್ನು ಆರತಿ ಬೆಳಗಿಸಿ, ಅರಶಿನ, ಕುಂಕುಮ ಹೂವನ್ನು ನೀಡಿ ಬರಮಾಡಿಕೊಳ್ಳಲಾಯಿತು. ಈ ದಿನವು ಭಕ್ತಿ, ಸಂತೋಷ ಹಾಗೂ ಆತ್ಮೀಯತೆಯ ಭಾವದಿಂದ ತುಂಬಿತ್ತು. ಶಾಲೆಗೆ ಹೊಸದಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಗಳನ್ನು ಹೃತ್ಪೂರ್ವಕವಾಗಿ ಸ್ವಾಗತಿಸಲಾಯಿತು.
ಕಾರ್ಯಕ್ರಮವು ಗುರುಪೂಜೆ ಮತ್ತು ಸತ್ಸಂಗದೊಂದಿಗೆ ಶುಭಾರಂಭಗೊಂಡಿತು. ಪೂಜ್ಯ ಗುರುವೇದ ಶ್ರೀ ಶ್ರೀ ರವಿಶಂಕರ ಗುರೂಜಿಯವರ ದಿವ್ಯ ಆಶೀರ್ವಾದವನ್ನು ಸ್ಮರಿಸಿ, ಭಕ್ತಿಭಾವದಿಂದ ಕಾರ್ಯಕ್ರಮ ನಡೆಸಲಾಯಿತು. ಆ ಪವಿತ್ರ ವಾತಾವರಣವು ಹೊಸ ಶೈಕ್ಷಣಿಕ ವರ್ಷದ ಸುಂದರ ಆರಂಭಕ್ಕೆ ಕಾರಣವಾಗಿ, ವಿದ್ಯಾರ್ಥಿಗಳು ಕೃತಜ್ಞತೆ ಮತ್ತು ಉತ್ಸಾಹದಿಂದ ತಮ್ಮ ಕಲಿಕೆಯ ಪಯಣವನ್ನು ಆರಂಭಿಸಲು ಪ್ರೇರಣೆ ನೀಡಿತು.
ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದ ವಿಶಿಷ್ಟ ಸಂಸ್ಕೃತಿ, ಮೌಲ್ಯಗಳು ಹಾಗೂ ಉತ್ತಮ ಆಚರಣೆಗಳ ಕುರಿತು ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ಕಾಮತ್ ಮಾಹಿತಿ ನೀಡಿದರು.






























