
ಕಾರ್ಕಳ : ತುಮಕೂರು ರಾಮಕೃಷ್ಣ– ವಿವೇಕಾನಂದ ಆಶ್ರಮ ಆಯೋಜಿಸಿದ ರಾಜ್ಯ ಮಟ್ಟದ ಭಾವ ಪ್ರಚಾರ ಪರಿಷತ್ ಸಂಸ್ಥೆಯು ರಾಮಕೃಷ್ಣ ಮಹಾಸಂಘದ ಹಿರಿಯ ಯತಿಗಳಾಗಿದ್ದ ಬ್ರಹ್ಮಲೀನ ಪೂಜ್ಯ ಸ್ವಾಮೀಜಿ ಪುರುಷೋತ್ತಮನಂದಜೀ ಮಹಾರಾಜನ್ ವಿರಚಿತ ವಿವೇಕ ವಿದ್ಯಾರ್ಥಿ ಪರೀಕ್ಷೆ 2025. ಈ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದ ಕಾರ್ಕಳ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದ 8ನೇ ತರಗತಿ ವಿದ್ಯಾರ್ಥಿ ಭೂಷಯ್ ಪೈ ಅವರನ್ನು ತುಮಕೂರಿನ ಕುಣಿಗಲ್ ರಸ್ತೆಯಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದ 33 ನೇ ವಾರ್ಷಿಕೋತ್ಸವದ ಸಮಾರoಭದಲ್ಲಿ ಸತ್ಕರಿಸಿ ಸನ್ಮಾನ ಮಾಡಲಾಯಿಯು.- ಈ ವಾರ್ಷಿಕೋತ್ಸವವು 11ಜನವರಿ 2026ರಂದು ನಡೆಯಿತು. ಈ ಲಿಖಿತ ಪರೀಕ್ಷೆಯನ್ನು ನವೆಂಬರ್ 9ರಂದು ರಾಜ್ಯದಾದ್ಯoತ ಆಯೋಜಿಸಲಾಗಿತ್ತು. ಸಾಧನೆ ಮಾಡಿದ ವಿದ್ಯಾರ್ಥಿಯನ್ನು ಶಾಲಾ ಆಡಳಿತ ಮಂಡಳಿ, ಪ್ರಾoಶುಪಾಲರು ಹಾಗೂ ಶಿಕ್ಷಕ ವೃಂದ ಅಭಿನಂದಿಸಿದರು.



















