
ಕಳೆದ 15 ವರ್ಷಗಳಿಂದ ಶ್ರೀ ನಿತ್ಯಾನಂದ ಸೇವಾ ಸಂಸ್ಥೆ (ರಿ.) ಎಂಬ ಧಾರ್ಮಿಕ ಸಂಸ್ಥೆಯು ತನ್ನ ವಾರ್ಷಿಕ ದಿನಾಚರಣೆಯ ಅಂಗವಾಗಿ ಭಕ್ತರ ಸಹಕಾರದೊಂದಿಗೆ ಶ್ರೀ ಕ್ಷೇತ್ರ ‘ಗಣೇಶ್ ಪುರಿ’ಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು ಈ ಬಾರಿಯೂ ಕೂಡ 16ನೇ ವಾರ್ಷಿಕ ದಿನಾಚರಣೆಯ ಅಂಗವಾಗಿ ದಿನಾಂಕ 01.02.2025ನೇ ಶನಿವಾರ ಸಂಜೆ 6 ಗಂಟೆಗೆ ಶ್ರೀ ಗಣೇಶ್ ಜೈ ಅಂಬೆ ಮಾತಾ ಮಂದಿರ, ಸಿಲ್ವರ್ ಪಾರ್ಕ್, ಮೀರಾ ರೋಡ್ ನಲ್ಲಿ ವಿಧಿ-ವಿಧಾನ ಹಾಗೂ ಭಜನೆ ಮಂಗಳಾರತಿಯೊಂದಿಗೆ ಶ್ರೀ ಕ್ಷೇತ್ರ ಗಣೇಶ್ ಪುರಿಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ.
‘ನಮ್ಮಯ ನಡಿಗೆ ಸ್ವಾಮಿಯ ನೆಡೆಗೆ’ ಎಂಬ ಶೀರ್ಷಿಕೆಯ ಈ ಪಾದಯಾತ್ರೆಯ ಕಾರ್ಯಕ್ರಮಕ್ಕೆ ಬೇವಿನಕೊಪ್ಪ ಶ್ರೀ ವಿಜಯಾನಂದ ಸ್ವಾಮೀಜಿಯವರು ಮತ್ತು ಸಾಂತಿಂಜ ಶ್ರೀ ಜನಾರ್ಧನ ಭಟ್ ರವರು ಆಶೀರ್ವಚನದೊಂದಿಗೆ ಚಾಲನೆಯನ್ನು ನೀಡಲಿದ್ದಾರೆ.
ಈ ಪಾದಯಾತ್ರೆಯಲ್ಲಿ ಭಾಗವಹಿಸಲು ಇಚ್ಛಿಸುವ ಭಕ್ತಾದಿಗಳು ತಮ್ಮ ಹೆಸರನ್ನು ದಿನಾಂಕ 30-01 2025 ರ ಒಳಗೆ ಈ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬೇಕಾಗಿ ವಿನಂತಿಸಲಾಗಿದೆ.
ದೂರವಾಣಿ ಸಂಖ್ಯೆ:
9869703998
9833850224
9588111177
9702368777
8369544002



















