
ದ
ಕಾರ್ಕಳ ಸೆ.25 ರಂದು ತಾಲೂಕು ಕಛೇರಿ ಸಭಾಂಗಣದಲ್ಲಿ ಶಾಸಕ ವಿ ಸುನೀಲ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಅಕ್ರಮ ಸಕ್ರಮ ಸಮಿತಿ ಸಭೆ ನಡೆಸಲಾಯಿತು.
ಸಮಿತಿಯ ಮುಂದೆ 35 ಕಡತಗಳನ್ನು ಹಾಜರಪಡಿಸಲಾಗಿತ್ತು. 17 ಹೊಸ ಕಡತಗಳಲ್ಲಿ 16 ಕಡತಗಳನ್ನು ಮಂಜೂರಾತಿ ಮಾಡಲಾಯಿತು. ಓರ್ವ ಗೈರು ಹಾಜರು. ನಕ್ಷೆಯಾಗಿ ಮಂಡಿಸಿರುವ 16 ಕಡತಕ್ಕೆ ಅಂತಿಮ ಮಂಜೂರಾತಿ ಆದೇಶ ನೀಡಲಾಯಿತು. 2 ಕಡತಗಳನ್ನು ಮರು ಸರ್ವೇಗೆ ಹಿಂದಿರುಗಿಸಲಾಯಿತು. ತಹಶೀಲ್ದಾರ್ ಪ್ರದೀಪ್ ಆರ್, ಉಪ ತಹಶೀಲ್ದಾರ್ ಮಂಜುನಾಥ ನಾಯಕ್, ಕಂದಾಯ ನಿರೀಕ್ಷಕರಾದ ರಿಯಾಜ್ ಮಹಮ್ಮದ್, ಶಿವಪ್ರಸಾದ್, ವಿಷಯ ನಿರ್ವಹಕರಾದ ತಾರೇಶ್, ಪೂಜಾ ಬಿ, ಸಮಿತಿ ಸದಸ್ಯರಾದ ರಮೇಶ್ ಬಜಕಲ, ಸುನೀತಾ ಶೆಟ್ಟಿ, ಕಾರ್ಕಳ ಹೋಬಳಿ ಅಜೆಕಾರು ಹೋಬಳಿಯ ಸಿಬ್ಬಂದಿ,. ಗ್ರಾಮ ಆಡಳಿತ ಅಧಿಕಾರಿಗಳು ಭಾಗವಹಿಸಿದ್ದರು.






















































