
ವಿ. ಎಸ್. ಕೆ ಫ್ರೆಂಡ್ಸ್ ಪಣಪಿಲ ಇದರ 8 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಕುಡಿಕೆ ಕಾರ್ಯಕ್ರಮ ಇದರ ಪ್ರಯುಕ್ತ ಆ. 26ರಂದು ಗ್ರಾಮಸ್ಥರಿಗೆ ಮುಂಜಾನೆ 9.30ರಿಂದ ಆಟೋಟ ಸ್ಪರ್ಧೆಗಳು ಸಂಜೆ 4.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಮುದ್ದುಕೃಷ್ಣ ಸ್ಪರ್ಧೆ, ಬಹುಮಾನ ವಿತರಣೆ, ಸಭಾಕಾರ್ಯಕ್ರಮ ನಡೆಯಲಿದೆ.
ರಾತ್ರಿ 8.00ಕ್ಕೆ ಸರಿಯಾಗಿ ಸುಭಾಸ್ ಜೈನ್ ಸಾರಥ್ಯ ದ, ಜಗನಾಥ್ ಶೆಟ್ಟಿ ಕುಡ್ಲ ನಿರ್ದೇಶನದ ಚೇತನ್ ನೀರೇ ಸಂಭಾಷಣೆ ಯ ಪ್ರಶಾಂತ್ ಶೆಟ್ಟಿ ಪರಪ್ಪಾಡಿ ರಚನೆಯ ಡೆನ್ನಾನ ಕಲಾವಿದರು ಕಾರ್ಕಳ ಇವರಿಂದ ಡೆನ್ನಾನ ನಾಟಕ ಪ್ರದರ್ಶನಗೊಳ್ಳಲಿದೆ.













