
ಕಾರ್ಕಳ: ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಸ್ತಿ ಶ್ರೀ ಪರಾಭವ ನಾಮ ಸಂವತ್ಸರದ ಜೇಷ್ಠ ಪುರುಷೋತ್ತಮ ಮಾಸ ದಿನ ಜೂನ್ 14.ರವಿವಾರ ಬೆಳಿಗ್ಗೆ ಗಂಟೆ 6:30 ರಿಂದ ಜೂನ್ 15ರ ಬೆಳಿಗ್ಗೆ ಗಂಟೆ 7:00 ರವರೆಗೆ ಲೋಕಕಲ್ಯಾಣಾರ್ಥಕಾಗಿ ಅಹೋರಾತ್ರಿ ಭಜನಾ ಕಾರ್ಯಕ್ರಮ ನಡೆಯಲಿದೆ,
ಈ ಏಕಹಾ ಭಜನೋತ್ಸವ ಕಾರ್ಯಕ್ರಮದಲ್ಲಿ ದೇವಸ್ಥಾನಕ್ಕೆ ಸಂಬಂದ ಪಟ್ಟ ಐದೂರು ಮಾಗಣೆಯ ಮಿಯ್ಯಾರು, ಮುಡಾರು,ನಲ್ಲೂರು,ರೆಂಜಾಳ,ಇರ್ವತ್ತೂರು ಹಾಗೂ ಕಾರ್ಕಳದ ವಿವಿಧ ಭಜವಾ ಮಂಡಳಿಗಳಿಂದ ಭಜನಾ ಸೇವೆ ನಡೆಯಲಿದ್ದು,ಸಹೃದಯಿ ಭಗವದ್ಭಕ್ತರು ಈ ಧಾರ್ಮಿಕ ಪುಣ್ಯ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ದೇವರ ಅನುಗ್ರಹ ಪ್ರಸಾದವನ್ನು ಪಡೆದುಕೊಳ್ಳುವಂತೆ ದೇವಸ್ಥಾನದ ಆಡಳಿತ ಮುಕ್ತೇಸರರಾದ ತಾರಾನಾಥ ಕೋಟ್ಯಾನ್ ಸೂರಾಲು ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

































