22.3 C
Udupi
Tuesday, December 16, 2025
spot_img
spot_img
HomeBlogನಲ್ಲೂರು ಗೋ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಶಿವಪ್ರಸಾದ್ ಹಿಂದೂ ಸಂಘಟನೆ ಕಾರ್ಯಕರ್ತ ಆಗಿರುವುದಿಲ್ಲ ವಿಶ್ವ ಹಿಂದೂ...

ನಲ್ಲೂರು ಗೋ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಶಿವಪ್ರಸಾದ್ ಹಿಂದೂ ಸಂಘಟನೆ ಕಾರ್ಯಕರ್ತ ಆಗಿರುವುದಿಲ್ಲ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಕಳ ಪ್ರಖಂಡ ಸ್ಪಷ್ಟನೆ

ನಲ್ಲೂರು ಗೋ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಶಿವಪ್ರಸಾದ್ ಎಂಬಾತ ಹಿಂದೂ ಸಂಘಟನೆ ಕಾರ್ಯಕರ್ತ ಆಗಿರುವುದಿಲ್ಲ ಮತ್ತು ಯಾವುದೇ ಪರಿವಾರ ಸಂಘಟನೆಯಲ್ಲಿಯೂ ಇದುವರೆಗೆ ಗುರುತಿಸಿಕೊಂಡಿಲ್ಲಎಂದು ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಪ್ರಸಾದ್ ನಿಟ್ಟೆ ತಿಳಿಸಿದ್ದಾರೆ

ಇದರ ಬಗ್ಗೆ ಸ್ಪಷ್ಟನೆ ನೀಡುವ ಅಗತ್ಯವೂ ಹಿಂದೂ ಸಂಘಟನೆಗಳಿಗೆ ಇಲ್ಲ ಎಂದಿರುವ ಅವರು,ಆದರೆ ಇದರ ಸತ್ಯಾಸತ್ಯತೆಯನ್ನು ತಿಳಿದಿದ್ದರೂ ಕೂಡ ಸುಳ್ಳು ಸುದ್ದಿ ಪ್ರಕಟಿಸುತ್ತಿರುವುದು ಸಮಾಜದಲ್ಲಿ ಗೊಂದಲಗಳಿಗೆ ಕಾರಣವಾಗುತ್ತದೆ.ಇದನ್ನು ಕಾರ್ಕಳ ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ.

ಸಮಾಜದ ಉನ್ನತಿಗೆ ಎಲ್ಲರೂ ಸಹಕಾರ ನೀಡಬೇಕೆ ಹೊರತು ಸಮಾಜದ ಸ್ವಾಸ್ತ್ಯ ಕದಡುವ ಕೆಲಸ ಮಾಡಬಾರದು. ತಪ್ಪು ಸಂದೇಶ ಹಾಗೂ ಸುಳ್ಳು ಸುದ್ದಿ ಪ್ರಕಟಿಸುವವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡುತಿದ್ದೇವೆ ಎಂದು ಭಜರಂಗ ದಳ ತಾಲೂಕು ಸಂಯೋಜಕ ಮನೀಶ್ ನಿಟ್ಟೆ ತಿಳಿಸಿದ್ದಾರೆ

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page