
ಬಿಗ್ ಬಾಸ್ ಕನ್ನಡ ಸೀಸನ್ 12’ ರಲ್ಲಿ ಅಶ್ವಿನಿ ಗೌಡ ಹಾಗೂ ಜಾನ್ವಿ ಸೇರಿ ರಕ್ಷಿತಾ ವಿರುದ್ಧ ಹರಿಹಾಯ್ದಿದ್ದು ಇದು ಸುದೀಪ್ ಅವರಿಗೆ ಇಷ್ಟ ಆಗಿಲ್ಲ. ಈ ಕಾರಣದಿಂದಲೇ ಅವರಿಗೆ ಕೋಪ ಬಂದಿದ್ದು ‘ತಪ್ಪಾಗಿ ಆಡಿದ ಮಾತಿಗೆ ಬುದ್ಧಿ ಕಲಿಸದೇ ಬಿಡಲ್ಲ’ ಎಂದು ಸುದೀಪ್ ಅವರು ಇಂದಿನ ಪ್ರೋಮೊದಲ್ಲಿ ನೇರ ಮಾತಲ್ಲಿ ಹೇಳಿದ್ದಾರೆ. ಈ ಮೂಲಕ ಇಂದಿನ ಎಪಿಸೋಡ್ ಎಷ್ಟು ಖಡಕ್ ಆಗಿರಬಹುದು ಎಂಬುದರ ಸೂಚನೆ ಸಿಕ್ಕಿದ್ದು ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.











