
ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರು, ಕೊಡುಗೈ ದಾನಿಯಾದ ಡಿ ಆರ್ ರಾಜು ಅವರ ನಿಧನಕ್ಕೆ ಜೋಡುಗರಡಿ ಸಾಣೂರು ಆಡಳಿತ ಮಂಡಳಿಯ ವತಿಯಿಂದ ಸಂತಾಪ ಸೂಚಿಸಲಾಗಿದೆ.
ಅಧ್ಯಕ್ಷರಾದ ಜಗದೀಶ್ ಪೂಜಾರಿ ಸಾಣೂರು ಇವರು ಮಾತನಾಡಿ ಅವರ ಸೌಮ್ಯ ಸ್ವಭಾವದ ವ್ಯಕ್ತಿತ್ವ, ಅವರು ಮಾಡಿದ ಸಮಾಜ ಸೇವೆ, ಅವರ ರಾಜಕೀಯ ಜೀವನ , ಅವರು ಮಾಡಿದ ದಾನ ಧರ್ಮದ ಬಗ್ಗೆ ಮಾತನಾಡಿ ಅವರ ವ್ಯಕ್ತಿತ್ವವನ್ನು ನೆನಪಿಸಿಕೊಂಡರು. ಹಾಗೆಯೇ ಗರಡಿಯ ಜೀರ್ಣೋದ್ದಾರ ಸಮಯದಲ್ಲಿ ಮಾಡಿದ ಆರ್ಥಿಕ ಹಾಗೂ ನೈತಿಕ ಸಹಾಯವನ್ನು ನೆನೆಪಿಸಿಕೊಂಡರು. ಇಂದು ಸಮಾಜಕ್ಕೆ ಆದ ನಷ್ಟವನ್ನು ನೆನೆಪಿಸಿಕೊಂಡು ದುಃಖ ವ್ಯಕ್ತವಡಿಸಿದರು. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿಕೊಂಡರು.



















