
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆಯುವ ಜ್ಞಾನಭಾರತ್-ಬಾಲ ಸಂಸ್ಕಾರ ಸಾಪ್ತಾಹಿಕ ಸರಣಿಯಲ್ಲಿ ವಿಹಾರಾರ್ಥವಾಗಿ ಮಕ್ಕಳು ಹಿರಿಯಡ್ಕದ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ವಿಹಾರದ ಮುಖ್ಯ ಅತಿಥಿ ರಂಗಕರ್ಮಿ, ಸಾಹಿತಿ ಪೂರ್ಣಿಮಾ ಸುರೇಶ್ ಅವರು ಸ್ಥಳ ಸಾನಿಧ್ಯದ ಪರಿಚಯ ನೀಡಿದರು.
ಈ ಸಂದರ್ಭ ವೃಂದದ ಉಪಾಧ್ಯಕ್ಷ ಡಾ.ದಯಾನಂದ ಬಾಯಾರ್, ಕಾರ್ಯದರ್ಶಿ ಸಂಗೀತಾ ಕುಲಾಲ್, ಸದಸ್ಯರಾದ ಜ್ಯೋತಿ ಪದ್ಮನಾಭ ಭಂಡಿ, ಗಾಯತ್ರಿ ನಾಗೇಶ್, ಚೇತನಾ ಸಂದೀಪ್, ಸಂತೋಷ್, ಸಂತೋಷ್ ನೆಲ್ಲಿಕಾರು, ಶೋಭಾ, ಪ್ರಸಾದಿನಿ ಹಾಗೂ ಚಂದ್ರಶೇಖರ್ ಪೂಜಾರಿ ಉಪಸ್ಥಿತರಿದ್ದರು.





















