
ಸಂಸ್ಕಾರ ಸಂಘಟನೆ ಸೇವೆ ಎನ್ನುವ ದ್ಯೇಯೋದ್ದೇಶದಿಂದ, ಉಚಿತವಾಗಿ ಯೋಗವಿದ್ಯೆಯನ್ನು ಕಲಿಸಿ ಕೊಡುತ್ತಾ,ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೂಡ ಯೋಗದ ಪರಿಚಯ ಮಾಡಿಸಿ,ಆ ಮೂಲಕ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಪಣತೊಟ್ಟಿರುವ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ರಿಜಿಸ್ಟರ್ ಕರ್ನಾಟಕ. ಉಡುಪಿ ಜಿಲ್ಲೆ.ಇವರು ಕಾರ್ಕಳ ಗಾಂಧಿ ಮೈದಾನ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದಲ್ಲಿ 48 ದಿನಗಳ ಉಚಿತ ಯೋಗ ತರಗತಿಯನ್ನು ದೇವಸ್ಥಾನದ ಆಡಳಿತ ಮಂಡಳಿಯ ಸಹಯೋಗದಲ್ಲಿ ಆಯೋಜಿಸಿರುತ್ತಾರೆ.

ನಿನ್ನೆ ಸಾಯಂಕಾಲ( 10.11.2024 ಆದಿತ್ಯವಾರ )
ಈ ಯೋಗ ತರಗತಿಯು ಉದ್ಘಾಟನೆಗೊಂಡಿದ್ದು, ಇಂದು ಮುಂಜಾನೆ ಸುಮಾರು 50 ಮಂದಿ ಯೋಗಾಭ್ಯಾಸದಲ್ಲಿ ಭಾಗವಹಿಸಿದ್ದು, ಯೋಗ ಬಂಧುಗಳಿಗೆ ನಿಧಾನವೇ ಪ್ರಧಾನ ವೆಂಬಂತೆ ಹಂತ ಹಂತವಾಗಿ ಯೋಗಾಬ್ಯಾಸವನ್ನು ಕಲಿಸಿ ಕೊಡಲಾಗುವುದು.
ಯೋಗಾಸಕ್ತರು ಈ ತರಗತಿಗೆ ಈ ವಾರದ ಕೊನೆಯವರೆಗೆ ಸೇರುವ ಅವಕಾಶವಿದ್ದು,ಸುತ್ತ ಮುತ್ತಲಿನ ಸಾರ್ವಜನಿಕರು ಇದರ ಸದುಪಯೋಗ ಪಡೆದು ಕೊಳ್ಳಬೇಕೆಂದು, ಆಯೋಜಕರು ವಿನಂತಿಸಿರುತ್ತಾರೆ.




















