28.6 C
Udupi
Tuesday, April 7, 2026
spot_img
spot_img
HomeBlogಕಾರ್ಕಳದ ಸರ್ಕಾರಿ ಬಿ.ಎಸ್‌ಸಿ. ನರ್ಸಿಂಗ್ ಕಾಲೇಜಿನ ಮೊದಲ ಬ್ಯಾಚ್‌ ನ 04 ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಟಾಪರ್ಸ್...

ಕಾರ್ಕಳದ ಸರ್ಕಾರಿ ಬಿ.ಎಸ್‌ಸಿ. ನರ್ಸಿಂಗ್ ಕಾಲೇಜಿನ ಮೊದಲ ಬ್ಯಾಚ್‌ ನ 04 ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಟಾಪರ್ಸ್ ಪಟ್ಟಿಯಲ್ಲಿ ಸ್ಥಾನ. ಅಭಿನಂದನೀಯ-ವಿ ಸುನಿಲ್‌ ಕುಮಾರ್

spot_imgspot_img

ಕಾರ್ಕಳ: ಕಾರ್ಕಳದಲ್ಲಿ 2022ರಲ್ಲಿ ಪ್ರಾರಂಭವಾದ ಸರ್ಕಾರಿ ಬಿ.ಎಸ್‌ಸಿ. ನರ್ಸಿಂಗ್ ಕಾಲೇಜು, ಕಾರ್ಕಳದ ಮೊದಲ ತಂಡದ 32 ವಿದ್ಯಾರ್ಥಿಗಳು ನಾಲ್ಕು ವರ್ಷದ ನರ್ಸಿಂಗ್ ಕೋರ್ಸನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಅವರಲ್ಲಿ ನಾಲ್ವರು ವಿದ್ಯಾರ್ಥಿಗಳು ರ್ಯಾಂಕ್‌ ಪಡೆದು ವಿಶ್ವವಿದ್ಯಾಲಯದ ಟಾಪರ್ಸ್ ಪಟ್ಟಿಯಲ್ಲಿ ಸ್ಥಾನ ಗಳಿಸುವ ಮೂಲಕ ಕಾಲೇಜಿಗೆ ಜೊತೆಗೆ ನಮ್ಮ ಕಾರ್ಕಳಕ್ಕೆ ಕೀರ್ತಿ ತಂದಿರುವುದು ಅಭಿನಂದನೀಯ ಎಂದು ಶಾಸಕ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.

ಮೈಕ್ರೋಬಯಾಲಜಿ ವಿಭಾಗದಲ್ಲಿ ಕು। ಕೃತಿ ಎ ಅವರು 5ನೇ ರ್ಯಾಂಕ್ ಹಾಗೂ ರಿಸರ್ಚ್ ಅಂಡ್ ಸ್ಪಾಟಿಸ್ಟಿಕ್ಸ್ ವಿಷಯದಲ್ಲಿ 9ನೇ ಕ್ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ಸಮುದಾಯ ಆರೋಗ್ಯ ಶುಶೂಷಾ ವಿಭಾಗದಲ್ಲಿ ಕು! ವಸಂತಿ ಬಾಲು ನಾಯಕ್ ಅವರು 7ನೇ ರಂಕ್ ಪಡೆದಿದ್ದಾರೆ. ಫಾರ್ಮಕಾಲಜಿ, ಪೆಥಾಲಜಿ ಮತ್ತು ಜೆನೆಟಿಕ್ಸ್ ವಿಷಯಗಳಲ್ಲಿ ಕು| ನಿಶಾ ಥಾಮಸ್ ಅವರು 8ನೇ ಯಾಂಕ್ ಗಳಿಸಿದ್ದಾರೆ. ನ್ಯೂಟ್ರಿಷನ್ ಮತ್ತು ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಶ್ರೀ ವಿನೋದ್ ಶಿದ್ದಲಿಂಗಪ್ಪ ಶಿವನಗುಟ್ಟಿ ಅವರು 9ನೇ ಯಾಂಕ್ ಪಡೆದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಒಟ್ಟು 32 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 21 ವಿದ್ಯಾರ್ಥಿಗಳು ವಿಶಿಷ್ಠ ದರ್ಜೆಯಲ್ಲಿ ಹಾಗೂ 8 ವಿದ್ಯಾರ್ಥಿಗಳು ಮೊದಲ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

2022ರಲ್ಲಿ ಸ್ಥಾಪಿತವಾದ ಈ ಕಾಲೇಜು ಉಡುಪಿ ಜಿಲ್ಲೆಯ ಮೊದಲ ಸರ್ಕಾರಿ ನರ್ಸಿಂಗ್ ಕಾಲೇಜು ಆಗಿದ್ದು, ತಾಲೂಕು ಕೇಂದ್ರದಲ್ಲಿ ಆರಂಭಗೊಂಡು ಗ್ರಾಮೀಣ ಬಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಉನ್ನತ ಶಿಕ್ಷಣ ದೊರಕಿಸಿಕೊಡಬೇಕೆಂಬ ಮಹತ್ವಕಾಂಕ್ಷಿಯೊಂದಿಗೆ ಪ್ರಾರಂಭಿಸಲಾಗಿರುತ್ತದೆ. ಕಾಲೇಜಿನಲ್ಲಿ ಉತ್ತಮ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಭೋದಕ ವೃಂದ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರಕಾರದೊಂದಿಗೆ ನಿರಂತರ ಪ್ರಯತ್ನ ಹಾಗೂ ಸ್ಥಳೀಯ ಉದ್ದಿಮೆಗಳ CSR ಅನುದಾನ ಬಳಸಿಕೊಂಡು ಕಾಲೇಜಿನ ಸಮಗ್ರ ಅಭಿವೃದ್ದಿಗೆ ನಿರಂತರ ಶ್ರಮಿಸಲಾಗುತ್ತಿದೆ. ಜೊತೆಗೆ ನರ್ಸಿಂಗ್‌ ಕಾಲೇಜಿನ ಸ್ವಂತ ಕಟ್ಟಡಕ್ಕಾಗಿ ಈಗಾಗಲೇ ಜಾಗ ಕಾಯ್ದಿರಿಸಲಾಗಿದ್ದು ಸರಕಾರದಿಂದ ಸೂಕ್ತ ಅನುದಾನದ ನಿರೀಕ್ಷೆಯಲ್ಲಿದ್ದೇವೆ.

ಕಾರ್ಕಳದಲ್ಲಿ ಸರ್ಕಾರಿ ಬಿ.ಎಸ್‌ಸಿ. ನರ್ಸಿಂಗ್ ಕಾಲೇಜು ಆರಂಭಿಕ ಹಂತದಲ್ಲಿಯೇ ಈ ಉತ್ತಮ ಸಾಧನೆ ಮಾಡಿರುವುದು ಅತ್ಯಂತ ಗಮನಾರ್ಹವಾಗಿದೆ. ಇದಕ್ಕಾಗಿ ಶ್ರಮಿಸಿದ ಆಡಳಿತ ವೈದ್ಯಾಧಿಕಾರಿಗಳು, ಕಾಲೇಜಿನ ಪ್ರಾಂಶುಪಾಲರು, ಬೋಧಕ ವೃಂದ, ಹಾಗೂ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ವರ್ಗವು ಮುಕ್ಯವಾಗಿ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಎಂದು ಮಾಜಿ ಸಚಿವ ಶಾಸಕ ವಿ. ಸುನಿಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page