
ಕಾರ್ಕಳ ದೀಪೋತ್ಸವದಲ್ಲಿ ಹಿಂದೂಗಳಿಗೆ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ ಕಾರ್ಯಕರ್ತನ ಮೇಲೆ ಸುಮೋಟೋ ಪ್ರಕರಣ ದಾಖಲಿಸಿರುವುದು ಅತ್ಯಂತ ದುರದೃಷ್ಟಕರ ಸಂಗತಿ.
ವಕ್ಫ್ ಬೋರ್ಡ್ ಹೆಸರಿನಲ್ಲಿ ಹಿಂದೂಗಳ ಭೂಮಿ ಕಬಳಿಸುವ ಲ್ಯಾಂಡ್ ಜಿಹಾದ್ ವಿರುದ್ಧ ಸುಮ್ಮನಿರುವ ಕಾಂಗ್ರೆಸ್ ಸರಕಾರ ಹಿಂದೂ ಕಾರ್ಯಕರ್ತರ ಮೇಲೆ ನಿರಂತರ ದಬ್ಬಾಳಿಕೆ ನಡೆಸುತ್ತಿರುವುದಕ್ಕೆ ಇದು ನೈಜ ಉದಾಹರಣೆ. ಪೋಲಿಸ್ ಇಲಾಖೆ ಈ ರೀತಿಯ ತಾರತಮ್ಯ ನೀತಿಯನ್ನು ಅನುಸರಿಸಬಾರದು, ಬಹುಸಂಖ್ಯಾತ ಹಿಂದೂಗಳ ಭಾವನೆಯ ಮೇಲೆ ನಿರಂತರ ದಾಳಿ ಮಾಡಿದರು ನಾವು ಸುಮ್ಮನಿದ್ದೇವೆ ಎಂದರೆ ಅದು ನಮ್ಮ ಹೇಡಿತನವಲ್ಲ ಬದಲಾಗಿ ಕಾನೂನಿನ ಮೇಲೆ ನಾವಿಟ್ಟಿರುವ ನಂಬಿಕೆ ಅಷ್ಟೇ.
ಹಿಂದೂಗಳ ಜಾತ್ರೆಯಲ್ಲಿ ಹಿಂದೂಗಳೇ ವ್ಯಾಪಾರ ನಡೆಸಬೇಕು. ಹಲಾಲ್ ವಸ್ತುಗಳನ್ನು ಹಿಂದೂಗಳ ಪವಿತ್ರ ಕ್ಷೇತ್ರಗಳಲ್ಲಿ ವ್ಯವಹರಿಸುವುದು ಹಿಂದೂ ವಿರೋಧಿ ಕೃತ್ಯ. ಇದರ ವಿರುದ್ಧ ಎಲ್ಲಾ ಹಿಂದೂ ದೇವಾಸ್ಥಾನ ದೈವಾಸ್ಥಾನದ ಮುಖಂಡರು ಜಾಗೃತರಾಗಬೇಕು. ಹಲಾಲ್ ಎಂಬ ಹೆಸರಿನಲ್ಲಿ ಅನ್ಯಮತೀಯರು ಮೈಲಿಗೆ ಮಾಡಿದ ವಸ್ತುಗಳನ್ನು ಹಿಂದೂಗಳ ದೇವರಿಗೆ ಅರ್ಪಿಸಿದರೆ ಅದು ಹಿಂದೂಗಳಿಗೆ ಅಪಮಾನ ಈ ರೀತಿಯ ಕೃತ್ಯಗಳನ್ನು ತಡೆಯದೇ ಇದ್ದಲ್ಲಿ ಹಿಂದೂಗಳ ಪವಿತ್ರ ಕ್ಷೇತ್ರಗಳು ಮುಂದಿನ ದಿನಗಳಲ್ಲಿ ಅನ್ಯಮತೀಯರ ವಶವಾಗುವುದರಲ್ಲಿ ಸಂಶಯವಿಲ್ಲ. ಕಾರ್ಕಳದಲ್ಲಿ ಅತೀ ಶೀಘ್ರವಾಗಿ ಹಿಂದೂ ಜಾತ್ರೆ ಸಂತೆ ವ್ಯಾಪಾರಸ್ಥರ ಸಂಘ ಅಸ್ತಿತ್ವಕ್ಕೆ ಬರಲಿದೆ ಆ ಮೂಲಕ ಈ ಎಲ್ಲಾ ಕೃತ್ಯಗಳಿಗೆ ಕಡಿವಾಣ ಹಾಕುವುವಲ್ಲಿ ನಾವು ಸಿದ್ಧರಾಗೋಣ ಎಂದು ಕಾರ್ಕಳ ತಾಲೂಕು ಬಜರಂಗದಳ ಸಂಯೋಜಕರಾದ ಮನೀಶ್ ನಿಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ



















