
ಗಾಯನಾಸಕ್ತರಿಗೆ, ಸಂಗೀತ ಪ್ರಿಯರಿಗಾಗಿ ” ಸವಿಗಾನ ಕರೋಕೆ ಕ್ಲಬ್ ” ಎಕ್ಸೆಲೆನ್ಸ್ ಪ್ರೊಫೆಷನಲ್ ಡಿಗ್ರಿ ಕಾಲೇಜಿನ ಸಭಾಂಗಣದಲ್ಲಿ ಭಾನುವಾರದಂದು ಶುಭಾರಂಭಗೊಂಡಿತು.
ಶ್ರೀ ಕ್ಷೇತ್ರ ಬಾಲಾಜಿ ಅಯ್ಯಪ್ಪ ಮಂದಿರದ ಪೂಜ್ಯ ಬಾಲಕ್ರಷ್ಣ ಗುರುಸ್ವಾಮಿ ಯವರು ದೀಪ ಬೆಳಗಿಸಿ ಉದ್ಘಾಟಿಸಿದರು.ರೆಂಜಾಳ ನಾರಾಯಣ ಭಟ್ ರವರು ಆಶೀರ್ವಚನ ನೀಡಿದರು. ಉದ್ಯಮಿ ವಿಜಯ್ ಶೆಟ್ಟಿ ಯವರು ಶುಭಾಶಂಸನೆ ಗೈದರು. ಸವಿಗಾನ ಕರೋಕೆ ಕ್ಲಬ್ ಗೆ ಸ್ಥಳಾವಕಾಶ ನೀಡಿದ ಎಕ್ಸೆಲೆನ್ಸ್ ಪ್ರೊಫೆಷನಲ್ ಡಿಗ್ರಿ ಕಾಲೇಜಿನ ಚೆಯರ್ಮನ್ .ಅಭಿಷೇಕ್ ಸುವರ್ಣ ರವರು ತಮ್ಮ ಸಂಸ್ಥೆಯು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿ ಶುಭ ಹಾರೈಸಿದರು. ಅತಿಥಿಗಳಾಗಿ ಆಗಮಿಸಿದ ಪೊರ್ಲು ಕಲಾವಿದೆರ್ ಕಾರ್ಲದ ಸ್ಥಾಪಕರಾದ ಸದಾಶಿವ ಶೆಟ್ಟಿ, ಸುಂದರ ಪುರಾಣಿಕ್ ಪ್ರೌಢಶಾಲೆ ಯ ಸಂಗೀತ ಶಿಕ್ಷಕರಾದ ಶ್ರೀ.ಕ್ರಷ್ಣಪ್ಪ , ಶ್ರೀ.ಮಹಾಲಕ್ಷ್ಮಿಭಜನಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಸರೋಜಾ ಮಾಧವನ್ , ಪಾರದೀಪ್ ಫಾಸ್ಫೇಟ್ ಲಿಮಿಟೆಡ್, ಪಣಂಬೂರು ಸಂಸ್ಥೆಯ ಜಂಟಿ ಮಹಾ ಪ್ರಬಂಧಕರಾದ ಕೀರ್ತನ್ ಕುಮಾರ್ ರವರು ಶುಭ ಹಾರೈಸಿದರು. ಲೇಖಕಿ ಹಾಗೂ ಡಾ.ಎನ್.ಎಸ್.ಏ.ಎಮ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಶ್ರೀಮತಿ.ಶ್ರೀ ಮುದ್ರಾಡಿ ಆರೋಗ್ಯ ಪೂರ್ಣ ಸಮಾಜದ ಬೆಳವಣಿಗೆಗೆ ಸಂಗೀತ ಹಾಗೂ ಸಾಹಿತ್ಯ ದ ಪ್ರಾಮುಖ್ಯತೆಯ ಬಗ್ಗೆ ಸಂದೇಶ ನೀಡಿದರು. ಸವಿಗಾನ ಮೆಲೋಡೀಸ್ ನ ಸ್ಥಾಪಕರಾದ ಪ್ರಕಾಶ್ ಕಾರ್ಕಳ ಪ್ರಾಸ್ತಾವಿಕ ಮಾತುಗಳನ್ನಾಡಿ ಅತಿಥಿ, ಅಭ್ಯಾಗತರನ್ನು ಸ್ವಾಗತಿಸಿದರು. ಶ್ರೀಮತಿ.ಸುನಿತಾ ಬಂಗೇರ ಪ್ರಾರ್ಥನೆಗೈದರು. ಶ್ರೀಮತಿ ಲತಾ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಸಂಧ್ಯಾ ಸದಾಶಿವ ಶೆಟ್ಟಿ ಧನ್ಯವಾದಗಳನ್ನು ಸಲ್ಲಿಸಿದರು. ಸಂತೋಷ್ ಮೂಡುಬಿದಿರೆ, ಸುನಿಲ್ ಮೂಡುಬಿದಿರೆ, ಎಕ್ಸೆಲೆನ್ಸ್ ಪ್ರೊಫೆಷನಲ್ ಡಿಗ್ರಿ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕರಾದ ಆಶಿಶ್ ಶೆಟ್ಟಿ ಯವರ ಸಂಪೂರ್ಣ ಸಹಕಾರ
ದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.



















































































