ಸಾಣೂರು ಅಣ್ಣಪ್ಪಸ್ವಾಮಿ ಸ್ವಸಹಾಯ ಸಂಘದ ಸದಸ್ಯರಿಂದ ಸ್ವಚ್ಛತ ಕಾರ್ಯ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ ರಿಜಿಸ್ಟರ್ ಕಾರ್ಕಳ ತಾಲೂಕಿನ ಸಾಣೂರು ವಲಯದ ಅಣ್ಣಪ್ಪಸ್ವಾಮಿ ಸ್ವಸಹಾಯ ಸಂಘದ ಸದಸ್ಯರಿಂದ ಸ್ವಾತಂತ್ರೋತ್ಸವದ ಪ್ರಯುಕ್ತ ಪ್ರತಿವರ್ಷದಂತೆ ಈ ವರ್ಷವೂ ಇಂದು ಸಾಣೂರು ಗಾಡಿ ಕೊಟ್ಯ ಪರಿಸರದ ಕೊರತಿ ಮತ್ತು ಗುಳಿಗ ದೈವದ ಕಟ್ಟೆಯ ಸುತ್ತಮುತ್ತಲಿನ ಬೆಳೆದಿರುವ ಮುಳ್ಳಿನ ಪೊದೆಗಳು ಪ್ಲಾಸ್ಟಿಕ್ ಕಸಕಡ್ಡಿ ತ್ಯಾಜ್ಯಗಳನ್ನು ತೆಗೆದು ಸ್ವಚ್ಛಗೊಳಿಸಿದರು.
ಈ ಸಂದರ್ಭದಲ್ಲಿ ಸೇವಾ ಪ್ರತಿನಿಧಿ ಶ್ರೀಮತಿ ಅರುಣಿ ಭೇಟಿ ನೀಡಿ ಸ್ವಚ್ಛತಾಶ್ರಮಧಾನದಲ್ಲಿ ಭಾಗವಹಿಸಿದ ರಾಜೇಶ್ ಆಚಾರ್ಯ,ಜಯಶೆಟ್ಟಿಗಾರ್, ಪ್ರವೀಣ್ ಶೆಟ್ಟಿ ಗಾರ್,ಅಶ್ವಥ್ ನಾರಾಯಣ, ಸಂತೋಷ್. ವಿ, ಪೂಜಾರಿ,ರಮೇಶ್ ಆಚಾರ್ಯ, ಶ್ರೀನಿವಾಸ್ ಆಚಾರ್ಯ, ದಿನೇಶ್ ಶೆಟ್ಟಿಗಾರ್,ಮಹೇಶ್ ಆಚಾರ್ಯ, ವಿಶ್ವನಾಥ ಪೂಜಾರಿ,ಹಾಗೂ ಶ್ರೀ ನಂದಿನಿ ಸಂಘದ ಕೃಷ್ಣಶೆಟ್ಟಿಗರ್ ಶಿವಾನಂದ ಶೆಟ್ಟಿಗಾರ್ ಇವರಿಗೆ ಕ್ಷೇತ್ರದ ಪರವಾಗಿ ಅಭಿನಂದನೆ ಸಲ್ಲಿಸಿದರು.

























































