ಆತ್ಮವಿಶ್ವಾಸ, ತಾಳ್ಮೆ, ವಿನಯ ಗುರುವಿನ ಶ್ರೇಷ್ಠ ಗುಣ: ಆರ್.ನಾರಾಯಣ ಶೆಣೈ

ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು
ಪ್ರೌಢಶಾಲೆಯಲ್ಲಿ ಗುರು ಪೂರ್ಣಿಮೆಯ ಆಚರಣೆ
ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು
ಪ್ರೌಢಶಾಲೆಯಲ್ಲಿ ಗುರು ಪೂರ್ಣಿಮೆಯನ್ನು ಜುಲೈ
29ರಂದು ಅತ್ಯಂತ ಭಕ್ತಿಭಾವ ಹಾಗೂ ಸಂಭ್ರಮದಿಂದ
ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾದ ಕಾರ್ಕಳ
ಶ್ರೀಮಧ್ಬುವನೇಂದ್ರ ಪ್ರೌಢಶಾಲೆಯ
ಮುಖ್ಯೋಪಾಧ್ಯಾಯರಾದ ಆರ್. ನಾರಾಯಣ ಶೆಣೈಯವರು
ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು
ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಯಾವ ಗುರುವಿನಲ್ಲಿ
ಆತ್ಮವಿಶ್ವಾಸ, ತಾಳ್ಮೆ, ವಿನಯ ಇರುತ್ತದೋ ಅಂತಹ ಗುರುವು
ಶ್ರೇ಼ಷ್ಠ ಗುರುವಾಗುತ್ತಾನೆ. ವ್ಯಾಸ ಮಹರ್ಷಿಗಳು
ವೇದಗಳನ್ನು ವಿಭಾಗಗಳನ್ನಾಗಿ ಮಾಡಿ ಕೇವಲ ಶಿಷ್ಯರಿಗೆ
ಮಾತ್ರವಲ್ಲದೆ, ಎಲ್ಲರಿಗೂ ವೇದ ಅಭ್ಯಾಸವನ್ನು
ಸುಲಭವಾಗಿಸಿದರು. ಅಂತಹ ಶ್ರೇ಼ಷ್ಠ ಗುರುಗಳ
ಜನ್ಮದಿನವನ್ನು ಗುರುಪೂರ್ಣಿಮೆಯೆಂದು ಆಚರಿಸುತ್ತೇವೆ
ಎಂದರು.
ವೇದಿಕೆಯಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ
ಮತ್ತು ಪ್ರೌಢಶಾಲೆಯ ಹಿರಿಯ ಶಿಕ್ಷಕಿಯರಾದ ಶ್ರೀಮತಿ
ಪ್ರಿಯಾ ಹಾಗೂ ಶ್ರೀಮತಿ ವೈಶಾಲಿ ಲಕ್ಷ್ಮಣ ಮೊಯ್ಲಿ
ಜೊತೆಗೂಡಿದರು.
ವಿದ್ಯಾರ್ಥಿನಿ ಅವನಿ ಪೈ ಗುರುವಿನ ಮಹತ್ವದ ಬಗ್ಗೆ ಹೇಳಿದರು.
ಕಾರ್ಯಕ್ರಮದಲ್ಲಿ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾರ್ಕಳ ಜ್ಞಾನಸುಧಾ
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿರುವ ದಿನೇಶ್
ಎಂ.ಕೊಡವೂರು, ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ
ಶಾಲೆ ಮತ್ತು ಪ್ರೌಢಶಾಲೆಯ ಪ್ರಾಂಶು ಪಾಲೆಯಾಗಿರುವ
ವಾಣಿ.ಕೆ.ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಉಪ
ಪ್ರಾಂಶುಪಾಲರಾಗಿರುವ ಸಾಹಿತ್ಯ, ಸಾರ್ವಜನಿಕ
ಸಂಪರ್ಕಾಧಿಯಾಗಿರುವ ಶ್ರೀಮತಿ ಜ್ಯೋತಿ ಪದ್ಮನಾಭ ಭಂಡಿ
ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ತನ್ವಿ ಪ್ರಾರ್ಥಿಸಿ, ಶಿಕ್ಷಕಿಯರಾದ ಅನಿಶಾ ನಿರೂಪಿಸಿ, ವಿದ್ಯಾ ಸ್ವಾಗತಿಸಿ, ಸುಪ್ರಿಯಾ ಧನ್ಯವಾದವಿತ್ತರು.






















































