
ಕಾರ್ಕಳ: ಸಾರ್ವಜನಿಕ ಶನಿಪೂಜಾ ಸಮಿತಿ, ಕರಿಯಕಲ್ಲು ವತಿಯಿಂದ ಶ್ರೀ ಶನಿಶ್ವರ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಶನಿ ಪೂಜೆಯ ಸಂದರ್ಭದಲ್ಲಿ, ಪ್ರಥಮ ಪ್ರಯತ್ನದಲ್ಲೇ CA (Chartered Accountant) ಪರೀಕ್ಷೆಯಲ್ಲಿ ಉತ್ತೀರ್ಣರಾದ ಕರಿಯಕಲ್ಲಿನ ಪ್ರತಿಭಾವಂತೆ ರೋಸ್ ಡಿಸಿಲ್ವ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಸುನಿಲ್ ಕೆ ಆರ್,ಪೊಲೀಸ್ ಉಪನಿರೀಕ್ಷಕರಾದ ಮುರಳೀಧರ ನಾಯಕ್ ಪದಾಧಿಕಾರಿಗಳು, ಸದಸ್ಯರು ಹಾಗೂ ಗ್ರಾಮಸ್ಥರು ರೋಸ್ ಡಿಸಿಲ್ವ ಅವರ ಸಾಧನೆಯನ್ನು ಶ್ಲಾಘಿಸಿ ಅಭಿನಂದಿಸಿದರು. ಅವರ ಮುಂದಿನ ವೃತ್ತಿಜೀವನ ಇನ್ನಷ್ಟು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.


















































