
ಕಾರ್ಕಳ: ಇಲ್ಲಿನ ಕ್ರೆöÊಸ್ಟ್ಕಿಂಗ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ
ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ನೂತನ ವಿದ್ಯಾರ್ಥಿ ಸಂಘದ
ಪದಗ್ರಹಣ ಕಾರ್ಯಕ್ರಮ ಸಂಸ್ಥೆಯ ಸಭಾಂಗಣದಲ್ಲಿ
ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ
ರೆ.ಫಾ ಕ್ಯಾನುಟ್ ಬರ್ಬೋಜ ಅವರು ದೀಪ ಬೆಳಗಿ ನೂತನ ವಿದ್ಯಾರ್ಥಿ ಸಂಘಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು “ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಕೂಡ ಮಹತ್ವ ನೀಡಿದಾಗ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯಾಗಲು ಸಾಧ್ಯ, ಈ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳ ಕೌಶಲ್ಯ ಪ್ರದರ್ಶನಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವುದು ಸಂತೋಷದ ವಿಷಯವಾಗಿದೆ.” ಎಂದು ಹೇಳಿದರು.
ಇನ್ನೋರ್ವ ಅತಿಥಿ ಕಾರ್ಕಳ ಪೊಲೀಸ್ ಠಾಣೆಯಲ್ಲಿ
ಸಹಾಯಕ ಸಬ್ ಇನ್ಸ್ಪೆಕ್ಟರ್ರಾಗಿರುವ ಶೇಖರ್ ನಾಯ್ಕ್ ಅವರು
ಮಾತನಾಡಿ “ಹೆತ್ತವರು ಮತ್ತು ಗುರುಗಳು ಹೇಳಿದ
ಬುದ್ಧಿಮಾತನ್ನು ನಿಮ್ಮಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ
ನಿಮ್ಮಲ್ಲಿ ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡು
ಸತ್ಪçಜೆಗಳಾಗಿ ಬಾಳಿ.” ಎಂದು ಹೇಳಿದರು. ಮತ್ತೋರ್ವ ಅತಿಥಿ
ರೊಟೇರಿಯನ್ ಡಾ| ಭರತೇಶ್ ಎ ಅವರು ಮಾತನಾಡಿ “ಉತ್ತಮ
ನಡತೆ, ಸಂಸ್ಕಾರ, ವಿನಯತೆ, ಶಿಸ್ತು ಇದ್ದಾಗ ಮಾತ್ರ ಸಮಾಜದಲ್ಲಿ
ಉತ್ತಮ ಸ್ಥಾನ ಗಳಿಸಲು ಸಾಧ್ಯ, ಇಂತಹ ಉತ್ತಮ ಮೌಲ್ಯಗಳ
ಜೊತೆಗೆ ಮಕ್ಕಳಿಗೆ ಬಾಲ್ಯದಲ್ಲಿಯೇ ಜೀವನ ಪಾಠವನ್ನು ಈ
ವಿದ್ಯಾಸಂಸ್ಥೆ ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಇದನ್ನು ನೀವು ನಿಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ನಿಮ್ಮ
ಬದುಕು ಉಜ್ವಲವಾಗಲು ಸಾಧ್ಯ” ಎಂದು ಹೇಳಿದರು. ಅತಿಥಿಗಳಾಗಿದ್ದ ಕಾರ್ಕಳ ರೋಟರಿ ಕ್ಲಬ್, ರಾಕ್ ಸಿಟಿಯ ಅಧ್ಯಕ್ಷರಾಗಿರುವ .ರೊಟೇರಿಯನ್ ಎಚ್ ಮಂಜುನಾಥ್ ಹೆಗ್ಡೆ ಅವರು ಮಾತನಾಡಿ
“ವಿದ್ಯಾರ್ಥಿಗಳಾದ ನೀವು ಬಾಲ್ಯದಲ್ಲಿಯೇ ನಿಮ್ಮಲ್ಲಿ ನಾಯಕತ್ವದ
ಗುಣವನ್ನು ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಿ ಬಾಳಿ” ಎಂದು
ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕ್ರೆöÊಸ್ಟ್ಕಿಂಗ್ ಎಜುಕೇಷನ್
ಟ್ರಸ್ಟ್ನ ಸದಸ್ಯ ಡಾ.ಪೀಟರ್ ಫೆರ್ನಾಂಡಿಸ್ ಅವರು ಮಾತನಾಡಿ “ಇಂದಿನ
ವಿದ್ಯಾರ್ಥಿಗಳಲ್ಲಿ ಅಗಾಧವಾದ ಬುದ್ಧಿವಂತಿಕೆಯಿದೆ, ಈ
ಬುದ್ಧಿವಂತಿಕೆಯನ್ನು ನೀವು ಉತ್ತಮ ಕೆಲಸಗಳಿಗೆ
ಉಪಯೋಗಿಸಿಕೊಂಡು ನಿಮ್ಮ ಶಾಲೆ, ಹೆತ್ತವರು ಹಾಗೂ ಸಮಾಜಕ್ಕೆ
ಹೆಸರು ತರುವ ವ್ಯಕ್ತಿಗಳಾಗಿ.” ಎಂದು ಹೇಳಿದರು. ಪ್ರೌಢಶಾಲಾ
ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಜೋಸ್ನಾ ಸ್ನೇಹಲತಾರವರು
ವಿದ್ಯಾರ್ಥಿ ಸಂಘದ ನೂತನ ಸದಸ್ಯರಿಗೆ ಪ್ರಮಾಣವಚನವನ್ನು
ಬೋಧಿಸಿದರು. ಹಿರಿಯ ಪ್ರಾಥಮಿಕ ವಿಭಾಗದ
ಮುಖ್ಯೋಪಾಧ್ಯಾಯರಾದ ಐ ಕ್ರಿಸ್ಟೋಫರ್ ಕೋಟ್ಯಾನ್ರವರು
ಪ್ರಸ್ತಾವನೆಗೈದರು. ವೇದಿಕೆಯಲ್ಲಿ ಸಂಸ್ಥೆಯ ವಿದ್ಯಾರ್ಥಿ
ಸಮಾಲೋಚಕಿಯಾಗಿರುವ ಡಾ.ಸಿಸ್ಟರ್ ಶಾರ್ಲೆಟ್ ಸಿಕ್ವೇರಾ, ಕಿರಿಯ
ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿಯಾದ ಸಿಸ್ಟರ್ ಜಾಲಿ
ಜೇಕಬ್ರವರು ಉಪಸ್ಥಿತರಿದ್ದರು. ಪ್ರೌಢಶಾಲಾ ವಿಭಾಗದ ಶಾಲಾ
ನಾಯಕ ತನ್ಮಯ್ ಉದಯ್ ಶೆಟ್ಟಿ ಸ್ವಾಗತಿಸಿ, ಪ್ರಾಥಮಿಕ ವಿಭಾಗದ
ಶಾಲಾ ನಾಯಕ ಮಿಲನ್ ಡಿಸೋಜ ವಂದಿಸಿದರು. ವಿದ್ಯಾರ್ಥಿಗಳಾದ
ಜೋರ್ಡನ್ ಡಿಸೋಜ ಮತ್ತು ಶ್ರುತ ಜೈನ್ ಕಾರ್ಯಕ್ರಮ
ನಿರೂಪಿಸಿದರು.








































