ನಿರ್ಮಾಪಕ ಭಾಮಾ ಹರೀಶ್ ಮಗ ಉಲ್ಲಾಸ್ ಸಾವು

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಭಾಮಾ ಹರೀಶ್ ಅವರ ಪುತ್ರ ಉಲ್ಲಾಸ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಕೊಡಚಾದ್ರಿಗೆ ಟ್ರೆಕ್ಕಿಂಗ್ಗೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಇತ್ತೀಚೆಗಷ್ಟೇ ಉಲ್ಲಾಸ್ ಅವರ ವಿವಾಹ ಚಂದನಾ ಗೌಡ ಅವರೊಂದಿಗೆ ನಿಶ್ಚಯವಾಗಿತ್ತು. ಕುಟುಂಬದವರ ಸಮ್ಮುಖದಲ್ಲಿ ಸರಳವಾಗಿ ದೀಪದ ಶಾಸ್ತ್ರವೂ ನೆರವೇರಿಸಲಾಗಿತ್ತು.
ಈ ವರ್ಷವೇ ಮದುವೆ ನಡೆಯಬೇಕಿದ್ದ ಹಿನ್ನೆಲೆ ಕುಟುಂಬದಲ್ಲಿ ಸಂತಸದ ವಾತಾವರಣ ಇತ್ತು. ಆದರೆ ಮದುವೆಗೆ ಮುನ್ನವೇ ಉಲ್ಲಾಸ್ ನಿಧನರಾದ ಸುದ್ದಿ ಕುಟುಂಬ ಹಾಗೂ ಆಪ್ತರಿಗೆ ತೀವ್ರ ಆಘಾತ ಉಂಟುಮಾಡಿದೆ.


































