30.2 C
Udupi
Monday, February 2, 2026
spot_img
spot_img
HomeBlogವಿಜಯನಗರ: ಭರತ್ ಹುಣ್ಣಿಮೆ ಸಂಭ್ರಮದಲ್ಲಿ, ಮೈಲಾರ ಲಿಂಗೇಶ್ವರನ ಕಾರ್ಣಿಕ ನುಡಿ

ವಿಜಯನಗರ: ಭರತ್ ಹುಣ್ಣಿಮೆ ಸಂಭ್ರಮದಲ್ಲಿ, ಮೈಲಾರ ಲಿಂಗೇಶ್ವರನ ಕಾರ್ಣಿಕ ನುಡಿ

“ಅಂಬಲಿ ರಾಶಿ, ಮುದ್ದಿನ ಗಿಣಿ ಸಮೃದ್ಧಿ ಐತಲೆ ಪರಾಕ್”👇👇

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಹರಪನಹಳ್ಳಿ ದೊಡ್ಡ ಮೈಲಾರದಲ್ಲಿ ಭರತ್ ಹುಣ್ಣಿಮೆ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ಮೈಲಾರ ಲಿಂಗೇಶ್ವರನ ಕಾರ್ಣಿಕ ಪ್ರಕಟವಾಗಿದೆ. ಭಕ್ತರ ಅಪಾರ ಜಯಘೋಷಗಳ ನಡುವೆ ಗೊರವಯ್ಯ ಬಿಲ್ಲನ್ನೇರಿ ಶೂನ್ಯವನ್ನು ದಿಟ್ಟಿಸಿ ನೋಡಿ ಈ ವರ್ಷದ ಕಾರ್ಣಿಕವನ್ನು ನುಡಿದರು.

ಈ ಬಾರಿ ಗೊರವಯ್ಯ “ಅಂಬಲಿ ರಾಶಿ ಮುದ್ದಿನ ಗಿಣಿ ಸಮೃದ್ಧಿ ಐತಲೆ ಪರಾಕ್” ಎಂದು ಕಾರ್ಣಿಕ ಹೇಳಿರುವುದು ಭಕ್ತರ ಗಮನ ಸೆಳೆದಿದೆ. ಈ ಕಾರ್ಣಿಕದ ಅರ್ಥವನ್ನು ಜನರು ವಿವಿಧ ರೀತಿಯಲ್ಲಿ ವಿಶ್ಲೇಷಿಸುತ್ತಿದ್ದು, ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ರಾಜ್ಯದ ಜನತೆಗೆ ಸುಖ-ಶಾಂತಿ ದೊರಕಲಿದೆ ಎಂಬ ಸೂಚನೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಬಹುಕಾಲದಿಂದ ಭರತ್ ಹುಣ್ಣಿಮೆಯ ದಿನ ಮೈಲಾರದಲ್ಲಿ ಕಾರ್ಣಿಕ ನುಡಿಯುವ ಸಂಪ್ರದಾಯ ನಡೆದುಕೊಂಡು ಬರುತ್ತಿದ್ದು, ಇಲ್ಲಿನ ಕಾರ್ಣಿಕದ ನಂತರವೇ ಮೈಲಾರ ಕ್ಷೇತ್ರದಲ್ಲಿಯೂ ಕಾರ್ಣಿಕ ಪ್ರಕಟವಾಗುತ್ತದೆ. ಮೈಲಾರದ ಕಾರ್ಣಿಕ ನಿಜವಾಗುತ್ತದೆ ಎಂಬ ಅಚಲ ನಂಬಿಕೆ ಭಕ್ತರಲ್ಲಿ ಇಂದಿಗೂ ಜೀವಂತವಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page