ಗೋವಿಗಾಗಿ ಹೊರೆಕಾಣಿಕೆ ಮೆರವಣಿಗೆ

ವಿಶ್ವ ಹಿಂದೂ ಪರಿಷದ್ ಕಾರ್ಕಳ ಪ್ರಖಂಡ ಗೋರಕ್ಷಾ ವಿಭಾಗ ಮತ್ತು ಬಜರಂಗದಳ ವಿಭಾಗದ ನೇತೃತ್ವದಲ್ಲಿ ಗೋಮಾತೆಯ ಹಸಿವು ನೀಗಿಸಲು ವಿವಿಧ ಗೋಶಾಲೆಗಳಿಗೆ ಗೋಗ್ರಾಸ ನೀಡುವ ವಿಶಿಷ್ಟ ಕಾರ್ಯಕ್ರಮ ಗೋವಿಗಾಗಿ ಹೊರೆಕಾಣಿಕೆ ಮೆರವಣಿಗೆ 07-12-2025 ಆದಿತ್ಯವಾರ ಬೆಳಿಗ್ಗೆ ಗಂಟೆ 9:00ಕ್ಕೆ ವಿವಿಧ ಸ್ಥಳಗಳಿಂದ ಬಂದ ಹೊರೆಕಾಣಿಕೆ ಕಾರ್ಕಳ ಆನಂತಶಯನ ದೇವಸ್ಥಾನದಿಂದ ಉದ್ಘಾಟನೆಗೊಂಡು ಗೋಕಾಣಿಕಾ ಮೆರವಣಿಗೆ ಬಂಡೀಮಠ ಬಸ್ ಸ್ಟ್ಯಾಂಡ್ ವರೆಗೆ ಸಾಗಿ ವಿವಿಧ ಗೋಶಾಲೆಗಳಿಗೆ ನೀಡಲಾಯಿತು.

ಉದ್ಘಾಟನಾ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಅಜಯ್ ಪುರುಷೋತ್ತಮ ಶೆಟ್ಟಿ, ಸಾಮಾಜಿಕ ಮುಖಂಡರು, ಉಡುಪಿ,ಮೆರವಣಿಗೆಯ ಉದ್ಘಾಟನೆಯನ್ನು ನವೀನ್ ಚಂದ್ರ ಶೆಟ್ಟಿ, ಅಧ್ಯಕ್ಷರು ರೋಟರಿ ಕ್ಲಬ್ ಕಾರ್ಕಳ ನೆರವೇರಿಸಿದರು.ಈ ಕಾರ್ಯಕ್ರಮದಲ್ಲಿ ಪದ್ಮ ಪ್ರಸಾದ್ ಜೈನ್, ಜಿಲ್ಲಾ ಅಧ್ಯಕ್ಷರು ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್, ಸುನೀಲ್ ಕೆ. ಆರ್ ವಿಶ್ವ ಹಿಂದೂ ಪರಿಷದ್ ಗೋರಕ್ಷಾ ಪ್ರಮುಖ್,ಕರ್ನಾಟಕ ದಕ್ಷಿಣ ಪ್ರಾಂತ,ಭುಜಂಗ ಕುಲಾಲ್, ಬಜರಂಗದಳ ಪ್ರಾಂತ ಸಹ ಸಂಯೋಜಕರು,ಪ್ರಸಾದ್ ಅಂಚನ್ ಕಾಪು, ಜಿಲ್ಲಾ ವಿಶ್ವ ಹಿಂದೂ ಪರಿಷದ್, ಗೋ ರಕ್ಷಾ ಪ್ರಮುಖ್,ಸುನಿಲ್ ನಿಟ್ಟೆ, ಜಿಲ್ಲಾ ಬಜರಂಗದಳ, ಗೋರಕ್ಷಾ ಪ್ರಮುಖ್,ಶರತ್ ಸಾಣೂರು, ಬಜರಂಗದಳ, ತಾಲೂಕು ಗೋರಕ್ಷಾ ಪ್ರಮುಖ್ ಪ್ರಸಾದ್ ನಿಟ್ಟೆ ಕಾರ್ಯದರ್ಶಿ ವಿಶ್ವಹಿಂದು ಪರಿಷದ್ ಕಾರ್ಕಳ ಪ್ರಖಂಡ ಉಪಸ್ಥಿತರಿದ್ದರು



















