
ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್ ಅವರ ಸೇವಾ ಕಾರ್ಯಗಳಲ್ಲಿ ಒಂದಾದ ಹೆಬ್ರಿ ಗ್ರಾಮದ ಬಡ ಮಹಿಳೆ ಚುಕ್ರಿ ಕೊರಗ ಅವರಿಗೆ ನಿರ್ಮಿಸಿದ ಸದೃಢ ಮನೆಯ ಹಸ್ತಾಂತರ ಕಾರ್ಯವು ರವಿವಾರ ಬೆಳಗ್ಗೆ ನಡೆಯಿತು.
ಶಾಸಕ ವಿ. ಸುನಿಲ್ ಕುಮಾರ್ ಅವರು ಬಡ ಮಹಿಳೆಯ ಕುಟುಂಬಕ್ಕೆ ಮನೆ ಹಸ್ತಾಂತರಿಸಿದರು. ಸರಳ ಕಾರ್ಯಕ್ರಮದಲ್ಲಿ ಪ್ರಮುಖರಾದ ಸತೀಶ್ ಪೈ ,ಲಕ್ಸ್ಮಿನಾರಾಯಣ ನಾಯಕ್ ,ತಾರಾನಾಥ್ ಬಂಗೇರ
ಸುಧಾಕರ್ ಹೆಗ್ಡೆ ,ಅರುಣ್ ಶೆಟ್ಟಿ ಗಣೇಶ್ ಕುಮಾರ್ ,ಹೆಚ್ ಕೆ ಸುಧಾಕರ್ ,ಸುರೇಶ್ ಭಂಡಾರಿಪ್ರಸಾದ್ ಭಂಡಾರಿ ಶಶಿಧರ್ ಭೋಜ ಶೆಟ್ಟಿ , ಚುಕ್ರಿ ಹಾಗೂ ಚುಕ್ರಿ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಬಡ ಮಹಿಳೆ ಚುಕ್ರಿ ಕೊರಗ ಹಾಗೂ ತನ್ನ ಹೆಣ್ಣು ಮಕ್ಕಳು, ಮೊಮ್ಮಕ್ಕಳು ಶೀಥಿಲಾವಸ್ಥೆಯ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಮಳೆ ಬಂದರೆ ಮನೆ ಸೋರುತ್ತಿತ್ತು, ಗೋಡೆಗಳು ಬಿರುಕು ಬಿಟ್ಟಿದ್ದವು, ಮೇಲ್ಛಾವಣಿ ಕುಸಿಯುವ ಸ್ಥಿತಿಯಲ್ಲಿತ್ತು. ಬದುಕು ಅಸಾಧ್ಯವಾಗಿತ್ತು.
ಮನೆಯ ಪಕ್ಕದ ಶೌಚಾಲಯವೂ ಮಳೆಗೆ ಕೊಚ್ಚಿಹೋಗಿತ್ತು. ಬದುಕು ಕತ್ತಲೆಗೆ ದೂಡಿತ್ತು. ಈ ಬಡ ಕುಟುಂಬದ ನೋವಿನ ಕಥೆ ಮನಗಂಡ ಶಾಸಕರು ಸದೃಢ ಮನೆ ನಿರ್ಮಾಣ ಕಾರ್ಯ ನಡೆಸಿ ಹಸ್ತಾಂತರಿಸಿದರು. ಸೇವಾ ಕಾರ್ಯದಡಿ ಶಾಸಕರು ಈ ಹಿಂದೆ ಅಗಸ್ಡ್ 15 ರಂದು ತನ್ನ 50ನೇ ಹುಟ್ಟು ಹಬ್ಬದ ಸೇವಾ ಕಾರ್ಯದ ಪ್ರಯುಕ್ತ ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಹಸ್ತಾಂತರಿಸಿದ್ದರು.














