
ಕಾಪು: ಆಂಧ್ರ ಮೂಲದ ಮೀನುಗಾರರನ್ನು ಹೊಂದಿದ್ದ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಕಾಪು ಲೈಟ್ ಹೌಸ್ ಬಳಿ ಸಮುದ್ರ ಪಾಲದ ಘಟನೆ ನಡೆದಿದೆ.
ಕಾಪು ಬೀಚ್ ನಲ್ಲಿ ಅಪಾಯಕ್ಕೆ ಸಿಲುಕಿದ್ದ ಟ್ರಾಲ್ ಬೋಟ್ ಸ್ಥಳೀಯರ ಕಾರ್ಯಾಚರಣೆಯಿಂದಾಗಿ ದೊಡ್ಡ ಅಪಾಯದಿಂದ ಎಲ್ಲರೂ ಪಾರಾಗಿದ್ದಾರೆ. ದೋಣಿಯಲ್ಲಿದ್ದ ಏಳು ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.
ಸ್ಥಳೀಯರಾದ ಧೀರೇಶ್, ಶಿವಾಜಿ, ಬಾಲಕೃಷ್ಣ, ದಯೋದರ ಪುತ್ರನ್, ಕೃಷ್ಣರಾಜ, ಸಂದೀಪ್, ಲೈಫ್ ಗಾರ್ಡ್ ಚಂದ್ರಶೇಖರ್ ಮೆಂಡನ್ ಮತ್ತು ತಂಡ ಹಾಗೂ ಪೋಸ್ಟಲ್ ಗಾರ್ಡ್ಗಳಾದ ಪ್ರಶಾಂತ್, ವಿನೋದ್ ಸಹಿತ ಮತ್ತಿತರರು ಮೀನುಗಾರರನ್ನು ರಕ್ಷಿಸಿ ದೋಣಿಯನ್ನು ದಡಕ್ಕೆ ತಲುಪಿಸಿದ್ದಾರೆ.






