
ಕಾರ್ಕಳ: ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ಶಿಕ್ಷಕರಿಗಾಗಿ ವಿಶೇಷವಾಗಿ ಆರ್ಟ್ ಆಫ್ ಲಿವಿಂಗ್ ನ ಶೈಕ್ಷಣಿಕ ಶಿಕ್ಷಕ ತರಬೇತಿ ಕಾರ್ಯಕ್ರಮವು ತಾರೀಕು 08/06/2025 ರಿಂದ 07/06/2025 ರವರೆಗೆ ನಡೆಯಿತು.
ಈ ಕಾರ್ಯಗಾರವನ್ನು ಶ್ರೀ ಶ್ರೀ ರವಿಶಂಕರ ವಿದ್ಯಾ ಮಂದಿರ ಬೆಂಗಳೂರು ಇಲ್ಲಿಯ ಆಡಳಿತಾಧಿಕಾರಿಯಾದ ಶ್ರೀಮತಿ ಸಬಿತಾ ಶೆಟ್ಟಿ ಅವರು ನಡೆಸಿಕೊಟ್ಟರು. ಈ ನಾಲ್ಕು ದಿನದ ಕಾರ್ಯಕಾರದಲ್ಲಿ ಸುದರ್ಶನ ಕ್ರಿಯೆ, ಹರಿ ಓಂ ಧ್ಯಾನ ಯೋಗ ನಿದ್ರೆ ಮೊದಲಾದ ದೈಹಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳು ಶಿಸ್ತುಬದ್ಧವಾಗಿ ನಡೆಯುವುದರ ಜೊತೆಗೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ಶಿಕ್ಷಕರಿಗೆ ಬೇಕಾದ ಹೊಸ ರೂಪುರೇಷೆಗಳನ್ನು ಆಯೋಜಿಸಲು ಬೇಕಾದ ಎಲ್ಲಾ ವಿಧದ ಚಟುವಟಿಕೆ ಹಾಗೂ ಯೋಜನೆಗಳನ್ನು ತಿಳಿಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರು ಸಕ್ರಿಯವಾಗಿ ಭಾಗವಹಿಸಿದರು. ಶಾಲೆಯ ಕೋಶಾಧಿಕಾರಿಯಾದ ದಿನೇಶ್ ಕಾಮತ್ ರವರು ಭೇಟಿ ನೀಡಿ ಕಾರ್ಯಗಾರದ ಮಾಹಿತಿ ಪಡೆದುಕೊಂಡರು. ನಾಲ್ಕನೇ ದಿನ ಶೈಕ್ಷಣಿಕ ತರಬೇತುದಾರರಾದ ಶ್ರೀಮತಿ ಸಬಿತಾ ಶೆಟ್ಟಿ ಇವರನ್ನು ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ಆರ್.
ಕಾಮತ್ ಗೌರಪೂರ್ವಕವಾಗಿ ಅಭಿನಂದಿಸಿದರು.



















