
ದಾವಣಗೆರೆ: ದಾವಣಗೆರೆಯಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್ ಈಶ್ವರಪ್ಪರನ್ನು ಹೊಗಳಿ ನಾನು ಮತ್ತು ಕೆಎಸ್ ಈಶ್ವರಪ್ಪ ಸಮಾನ ದುಃಖಿಗಳು, ಒಂದೇ ಬಳ್ಳಿಯ ಹೂಗಳು ಮತ್ತು ಒಂದೇ ದೋಣಿಯ ಪಯಣಿಗರು! ಯಾಕೆ ಅಂತ ಕನ್ನಡಿಗರಿಗೆ ಚೆನ್ನಾಗಿ ಗೊತ್ತು. ತನಗೆ ಮತ್ತು ಈಶ್ವರಪ್ಪನವರಿಗೆ ದೇವರು ಒಳ್ಳೆಯ ಸಂತಾನ ದಯಪಾಲಿಸಿದ್ದಾನೆ ಎಂದು ಹೇಳಿ ಖುಷಿಪಟ್ಟರು.
ಬೇರೆ ಕೆಲವು ರಾಜಕಾರಣಿಗಳ ಮಕ್ಕಳು ಡ್ರಗ್ಸ್ ತೆಗೆದುಕೊಂಡು ರಾತ್ರಿ ಎಲ್ಲೋ ಬಿದ್ದುಕೊಂಡಿರುತ್ತಾರೆ ಎಂದು ಹೇಳಿದ ಯತ್ನಾಳ್ ದಾವಣಗೆರೆ ಜಿಲ್ಲೆಯಲ್ಲೂ ಒಂದಿಬ್ಬರು ರಾಜಕಾರಣಿಗಳ ಮಕ್ಕಳು ಆ ಕೆಟೆಗರಿಗೆ ಸೇರುತ್ತಾರೆ ಎಂದು ಹೇಳಿದ್ದಾರೆ.








