
ರೋಟರಿ ಕ್ಲಬ್ ಕಾರ್ಕಳ ಇದರ ಸಹಕಾರದೊಂದಿಗೆ ಸಾರ್ವಜನಿಕ ಹಿಂದೂ ರುದ್ರಭೂಮಿ ಕರಿಯಕಲ್ಲು ಕಾರ್ಕಳ ಇಲ್ಲಿ ಮೃತದೇಹಗಳನ್ನು ಸುಡಲು ಮಳೆಗಾಲಕ್ಕೆ ಸಹಕಾರವಾಗುವಂತೆ ನೂತನ ಕಟ್ಟಿಗೆ ದಾಸ್ತನು ಕೊಠಡಿಯನ್ನು ಜಿಲ್ಲಾ ಗವರ್ನರ್ ರೋ.ಸಿ. ಎ.ದೇವಾನಂದರವರು ಹಸ್ತಾಂತರ ಮಾಡಿದರು.
ಈ ಸಂಧರ್ಭದಲ್ಲಿ ಸಹಾಯಕ ಗವರ್ನರ್ ರೋ. ಅನಿಲ್ ಡೇಸಾ , ವಲಯ ಸೇನಾನಿ ರೋ. ಸುರೇಶ್ ನಾಯಕ್,ರೋ. ರೇಖಾ ದೇವಾನಂದ ,ರೋಟರಿ ಕ್ಲಬ್ ನ ಅಧ್ಯಕ್ಷ ಇಕ್ಬಾಲ್ ಅಹಮ್ಮದ್, ಕಾರ್ಯದರ್ಶಿ ಗಣೇಶ್ ಸಾಲಿಯಾನ್, ಪುರಸಭೆ ಅಧ್ಯಕ್ಷ ಯೋಗೀಶ್ ದೇವಾಡಿಗ, ಉಪಾಧ್ಯಕ್ಷ ಪ್ರಶಾಂತ್ ಕೋಟ್ಯಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ್ ರಾಣೆ,ಹಿಂದೂ ರುದ್ರಭೂಮಿ ವ್ಯವಸ್ಥಾಪನ ಸಮಿತಿಯ ಸಂಚಾಲಕರಾದ ಪ್ರಕಾಶ್ ರಾವ್, ರೋಟರಿ ಸಂಸ್ಥೆಯ ಸದಸ್ಯರು, ಹಿಂದೂ ರುದ್ರಭೂಮಿಯ ವ್ಯವಸ್ಥಾಪನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.









