31.9 C
Udupi
Monday, April 13, 2026
spot_img
spot_img
HomeBlogಹೆತ್ತಮ್ಮನ ನೂರರ ಜನ್ಮಸಂಭ್ರಮ ಅಜೆಕಾರಿನಲ್ಲಿ "ಜ್ಞಾನಮಂದಿರ"

ಹೆತ್ತಮ್ಮನ ನೂರರ ಜನ್ಮಸಂಭ್ರಮ ಅಜೆಕಾರಿನಲ್ಲಿ “ಜ್ಞಾನಮಂದಿರ”

ರೇಷ್ಮಾ ಶೆಟ್ಟಿ,ಗೊರೂರು

ಸುಧಾಕರರೆಂಬ ಅಜೆಕಾರಿನ ಕುವರ
ಕಟ್ಟಿದರು ಜ್ಞಾನಸುಧಾವೆಂಬ ವಿದ್ಯಾಮಂದಿರ
ಸೃಷ್ಟಿಯಾಯಿತು ವಿದ್ಯಾರ್ಥಿಗಳ ಮಹಾಪೂರ
ಬಿತ್ತುತ್ತಿದ್ದಾರೆ ಜ್ಞಾನಾರ್ಜನೆಯ ತತ್ವಸಾರ

ಹೆತ್ತವರೇ ಇವರಿಗೆ ದೇವರಂತೆ
ನಡೆದರು ಆವರ ಮಾರ್ಗದರ್ಶನದಂತೆ
ಬಡತನದಲೂ ಬದುಕ ಬೆಳಗಿಸಿಕೊಂಡರಂತೆ
ಸೋಲಲ್ಲು ಗೆಲುವು ಕಂಡ ಸರದಾರನಂತೆ

ಹೆತ್ತಮ್ಮನ ನೂರರ ಜನ್ಮಸಂಭ್ರಮ
ಮಗ ಗಣಿತದೊಂದಿಗೆ ಸದಾಸಂಗಮ
ಜ್ಞಾನಸರಸ್ವತಿ ಧರೆಗಿಳಿದ ಜ್ಞಾನಸುಧಾಮ
ವಿದ್ಯೆಯಲ್ಲಿಯೇ ಇವರಿಗೆ ವಿಶೇಷಪ್ರೇಮ

ಅಜೆಕಾರಿನ ಮಣ್ಣು ಪಾವನವಾಯ್ತು
ಪದ್ಮನಗರವೆಂಬ ಹೆಸರುಪಡೆಯಿತು
ವಿದ್ಯಾರ್ಥಿಗಳಿಗೆ ಭದ್ರ ಬುನಾದಿಯಾಯ್ತು
ಕೋಟಿ ಕಂಗಳ ಕನಸು ನನಸಾಯ್ತು

ಬೆಳಗಿ ಬಾಳಲಿ ಜ್ಞಾನಸುಧಾ
ಅಚ್ಚಳಿಯದ ಹೆಸರಾಗಲಿ ಸರ್ವಸದಾ
ಅಸ್ತು ಅನ್ನಲಿ ವಿದ್ಯಾದೇವತೆಗಳು
ವಿದ್ಯೆ ಪಡೆಯಲಿ ಮುಂದಿನ ಪೀಳಿಗೆಗಳು

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page