
ಬೆಂಗಳೂರು: ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ ನೇತೃತ್ವದ ನಿಯೋಗವು ಹಾಲಿಗೆ ಶೇ.5 ರಷ್ಟು ಜಿಎಸ್ಟಿ ತೆರಿಗೆಯಿದ್ದರೆ ಮಂದಗೊಳಿಸಿದ ಅಥವಾ ನೀರಿನಾಂಶ ತೆಗೆದ ಹಾಲಿಗೆ ಶೇ.12 ರಷ್ಟು ದುಬಾರಿ ತೆರಿಗೆ ವಿಧಿಸಲಾಗುತ್ತಿದ್ದು, ಇದನ್ನು ಕಡಿಮೆ ಮಾಡುವಂತೆ ಸಚಿವ ಕೃಷ್ಣಬೈರೇಗೌಡ ಅವರನ್ನು ಮನವಿ ಮಾಡಿದೆ.
ಹಾಲಿನ ಮೇಲಿನ ದುಬಾರಿ ತೆರಿಗೆ ಕಡಿಮೆ ಮಾಡಿದರೆ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಕ್ಕೆ ಪ್ರತಿ ವರ್ಷ 30 ಕೋಟಿ ರು. ಉಳಿತಾಯವಾಗಲಿದೆ. ಹೀಗಾಗಿ ಜಿಎಸ್ಟಿ ಕೌನ್ಸಿಲ್ನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಕೃಷ್ಣಬೈರೇಗೌಡ ಅವರಿಗೆ ಮನವಿ ಸಲ್ಲಿಸಿದ್ದಾರೆ.





