
ಕಾರ್ಕಳ -ದಿ. 4.12.2025 ರಂದು ಶ್ರೀ ಭುವನೇಂದ್ರ ಆಂಗ್ಲ ಮಾಧ್ಯಮ ಶಾಲೆ ಇದರ ವಾರ್ಷಿಕೋತ್ಸವದ ಸುಸಂದರ್ಭದಲ್ಲಿ ಇಲ್ಲಿಯ ಶಿಕ್ಷಕಿಯಾದ ಶ್ರೀಮತಿ ಸೀಮಾ ಕಾಮತ್ ಇವರ ಆರನೇ ಪುಸ್ತಕ, ಕಥಾ ಸಂಕಲನ ಆ ಕಾಲವೊಂದಿತ್ತು ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಂಡಿತು .
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಕೆ ನರೇಂದ್ರ ಕಾಮತ್ ಕೆ,ಶಾಲಾ ಅಧ್ಯಕ್ಷರಾದ ಶ್ರೀ ಯೋಗೀಶ್ ಹೆಗ್ಡೆ,ಮುಖ್ಯ ಅತಿಥಿ ನಿವೃತ್ತ ಮುಖ್ಯ ಶಿಕ್ಷಕ ಶ್ರೀ ಸಂಜೀವ ದೇವಾಡಿಗ,ಹೈಸ್ಕೂಲ್ ವಿಭಾಗದ ಮುಖ್ಯ ಶಿಕ್ಷಕರಾದ ನಾರಾಯಣ ಶೆಣೈ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಿದ್ಯಾ ವಿ ಕಿಣಿ ಹಾಗೂ ಪುಸ್ತಕದ ಲೇಖಕರಾದ ಶ್ರೀಮತಿ ಸೀಮಾ ಕಾಮತ್ ಹಾಗೂ ಇವರ ಸುಪುತ್ರ ಚಿರಾಗ್ ಕಾಮತ್, ಸಹೋದರಿ ಶಿಲ್ಪ ಕಿಣಿ ಹಾಗೂ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಂತಹ ಸಾವಿತ್ರಿ ಮನೋಹರ್ ಮುಂತಾದವರು ಉಪಸ್ಥಿತರಿದ್ದರು.
.ಲೇಖಕಿಯು ತನ್ನ ಬಾಲ್ಯದ ನೆನಪುಗಳನ್ನು ಕಥಾಗುಚ್ಚವಾಗಿ ಅಕ್ಷರಗಳಲ್ಲಿ ಪೋಣಿಸಿ ಈ ಕಥಾ ಸಂಕಲನವನ್ನು ರಚಿಸಿದ್ದಾರೆ.ಇವರು ಪುಸ್ತಕ ಬಿಡುಗಡೆಯ ಸುಸಂದರ್ಭದಲ್ಲಿ ಪುಸ್ತಕ ಬರೆಯಲು ತನಗೆ ಪ್ರೇರಣೆಯಾದ ತನ್ನ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು.



















