
ದೆಹಲಿ: ಡಿಸಿಎಂ ಡಿಕೆ ಶಿವಕುಮಾರ್, ದೆಹಲಿಯಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿದ ವೇಳೆ ಪತ್ರಕರ್ತರೊಬ್ಬರು ಎಐಸಿಸಿ ಮಧ್ಯಸ್ಥಿಕೆಯಲ್ಲಿ ನಿಮ್ಮ ಮತ್ತು ಸಿದ್ದರಾಮಯ್ಯ ನಡುವೆ ಅಧಿಕಾರ ಹಂಚಿಕೆ ವಿಷಯದಲ್ಲಿ ಒಡಂಬಡಿಕೆ ಆಗಿರೋದು ನಿಜವೇ ಎಂದು ಪ್ರಶ್ನಿಸಿದಾಗ ಇದಕ್ಕೆ ಉತ್ತರಿಸಿದ ಡಿಕೆಶಿ ಕೇವಲ ಮಾಧ್ಯಮಗಳಲ್ಲಿ ಮಾತ್ರ ಅಂಥ ಊಹಾಪೋಹ ಕೇಳಿಬರುತ್ತಿದೆ, ಅದರೆ ನನ್ನ ಮಟ್ಟಿಗೆ ಅದ್ಯಾವುದೂ ಇಲ್ಲ ಎಂದು ಹೇಳಿದ್ದಾರೆ.
ಹೈಕಮಾಂಡ್ ನಾಯಕರು ಶಾಸಕರ ಅಭಿಪ್ರಾಯಗಳನ್ನು ರಂದೀಪ್ ಸುರ್ಜೆವಾಲ ಮೂಲಕ ಸಂಗ್ರಹಿಸಿ ಸಿಎಂ ಮತ್ತು ಡಿ ಸಿಎಂ ರನ್ನು ದೆಹಲಿಗೆ ಕರೆಸಿದ್ದಾರೆ ಅಂತ ಹೇಳಲಾಗುತ್ತಿದೆ.