
ಕಾರ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕರಾದ ವಿ ಸುನೀಲ್ ಕುಮಾರ ಅವರ ಅನುದಾನನಿಂದ ಸುಮಾರು 5 ಲಕ್ಷ ವೆಚ್ಚದಲ್ಲಿ ಮರು ಡಾಮರೀಕರಣಗೊಂಡ ದೆಂದಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನ ಸಂಪರ್ಕ ರಸ್ತೆಯನ್ನು ಶಾಸಕರಾದ ಸುನಿಲ್ ಕುಮಾರ್ ಲೋಕಾರ್ಪಣೆಗೈದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯುವರಾಜ್ ಜೈನ್ , ಉಪಾಧ್ಯಕ್ಷರಾದ ಯಶೋಧ ಶೆಟ್ಟಿ, ವೇದಮೂರ್ತಿ ಶ್ರೀರಾಮ್ ಭಟ್ ,ರಮೇಶ್ ಶೆಟ್ಟಿ ಮುಂದೆಲಾಡಿಮನೆ ,ವಿಜಯ್ ಶೆಟ್ಟಿ ಪೊರ್ಲೊಟ್ಟು ಗುತ್ತು, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಪ್ರವೀಣ್ ಕೋಟ್ಯಾನ್ ಪಂಚಾಯತ್ ಸದಸ್ಯರುಗಳು ಉಪಸ್ಥಿತರಿದ್ದರು. ಮೋಹನ್ ಶೆಟ್ಟಿ ಸಾಣೂರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.





