29.5 C
Udupi
Monday, December 22, 2025
spot_img
spot_img
HomeBlogಸಾಣೂರು ಗ್ರಾಮ ಪಂಚಾಯತ್ "ಗ್ರಾಮ ಸಭೆ"

ಸಾಣೂರು ಗ್ರಾಮ ಪಂಚಾಯತ್ “ಗ್ರಾಮ ಸಭೆ”

ನೀವು ಸುರಕ್ಷಿತರಾದರೆ ಗ್ರಾಮವೇ ಸುರಕ್ಷಿತ : ಯಶೋದರ

ಕಾರ್ಕಳ: ಅಂಗಡಿ, ಮನೆ ಸುತ್ತಮುತ್ತ ಪರಿಸರದಲ್ಲಿ ಸ್ವಚ್ಚತೆಗೆ ಹೆಚ್ವಿನ ಆದ್ಯತೆ ನೀಡಿ, ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳುದರ ಜೊತೆಗೆ ಸೊಳ್ಳೆ ಪರದೆ ಬಳಸುವುದು ಸೂಕ್ತ. ಕೊಳಚೆ ನೀರು ನಿಲ್ಲದಂತೆ ಎಚ್ಚರ ವಹಿಸಿದಲ್ಲಿ ನೀವು ನಿಮ್ಮವರು ಸುರಕ್ಷಿತ, ನೀವು ಸುರಕ್ಷಿತರಾದರೆ ಗ್ರಾಮವೇ ಸುರಕ್ಷಿತ ಎಂದು ಇರ್ವತ್ತೂರು ಪ್ರಾಥಮಿಕ ಕೇಂದ್ರದ ಆರೋಗ್ಯಾಧಿಕಾರಿ ಯಶೋದರ ಅವರು ಅಭಿಪ್ರಾಯಪಟ್ಟರು.
ತಾಲೂಕಿನ ಸಾಣೂರು ಸುವರ್ಣ ಗ್ರಾಮೋದಯ ಸೌಧ ಸಭಾಂಗಣದಲ್ಲಿ ಬುಧವಾರ ನಡೆದ ಸಾಣೂರು ಗ್ರಾಮ ಪಂಚಾಯತ್‌ನ 2024-25ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯಲ್ಲಿ ಅವರು ಮಾಹಿತಿ ನೀಡಿದರು.
ಡೆಂಗ್ಯೂ ಬಾಧಿತರಿಗೆ ಚಿಕಿತ್ಸೆ ನೀಡಲು ಬೇಕಾದ ಎಲ್ಲಾ ಸೌಕರ್ಯ ಇವೆ. ಪ್ರಾಥಮಿಕ ವೈದ್ಯಕೀಯ ಕೇಂದ್ರಗಳಲ್ಲಿ ಜ್ವರ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮವಹಿಸಲಾಗಿದೆ ಎಂದರು.
ನೋಡೆಲ್ ಅಧಿಕಾರಿಯಾಗಿ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸ ರಾವ್, ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖೆಯಿಂದ ಸಿಗುವ ಸೌಲ️ಭ್ಯಗಳ ಮಾಹಿತಿ ನೀಡಿದರು.
ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷೆ ಯಶೋಧ ವಿ ಶೆಟ್ಟಿ, ಸದಸ್ಯರಾದ ಪ್ರಸಾದ್ ಪೂಜಾರಿ, ಪ್ರಕಾಶ್ ರಾವ್, ಮಂಜುನಾಥ್ ಶೆಟ್ಟಿ, ಸುಭಾಸ್ ಪೂಜಾರಿ, ರಜನಿ, ಗಿರಿಜ, ಪ್ರಮೀಳಾ, ಸರಸ್ವತಿ, ರಮೇಶ್, ವಸಂತ, ಸುಜಾತ ಶೆಟ್ಟಿ, ಅಮಿತಾ ಪಿ.ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಧು ಎಂ.ಸಿ., ಉಪಸ್ಥಿತರಿದ್ದರು
.

ಈ ಸಂದರ್ಭದಲ್ಲಿ ಸಾಣೂರು ಗ್ರಾಮದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಯರನ್ನು ಹಾಗೂ ಸ್ಚಚ್ಚತಾ ಕಾರ್ಯದಲ್ಲಿ ತಮ್ಮನ್ನು ತೋಡಗಿಸಿಕೊಂಡಿರುವ ಸಾಣೂರು ಯುವಕ ಮಂಡಲ️, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಣೂರು ಶೌರ್ಯ ವಿಪತ್ತು ನಿರ್ವಹಣಾ ಘಟಕ ಮತ್ತು ಶಕ್ತಿ ಸಮೃದ್ಧಿನಿ ಒಕ್ಕೂಟ ಸಾಣೂರು ಇವರನ್ನು ಅಭಿನಂದಿಸಲಾಯಿತು.
ಸವಿತಾ ಕಾರ್ಯಕ್ರಮ ನಿರೂಪಿಸಿದರು. ಮಧು ಎಂ.ಸಿ.,ವಂದಿಸಿದರು.

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page