
ಕಾರ್ಕಳ: ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.ಸಂಸ್ಥೆಯ ಬಾಲಮಂದಿರದಿಂದ ಪೂರ್ವಪ್ರಾಥಮಿಕ ತರಗತಿಯ ಪುಟಾಣಿಗಳು ಕೃಷ್ಣ_ರಾಧೆಯರ ವೇಷಭೂಷಣವನ್ನು ಧರಿಸಿ ಆಚರಣೆಗೆ ಮೆರಗನ್ನು ನೀಡಿದರು.
ಕಾರ್ಯಕ್ರಮದ ಅಂಗವಾಗಿ ಹತ್ತನೇ ತರಗತಿ ವಿದ್ಯಾರ್ಥಿಗಳು ಕೃಷ್ಣನ ನೀತಿಯನ್ನು ತಿಳಿಸುವ ಹಲವಾರು ವಿಡಿಯೋಗಳನ್ನು ಪ್ರತಿಯೊಂದು ತರಗತಿಯ ಮಕ್ಕಳಿಗೆ ಪ್ರದರ್ಶಿಸಿದರು.ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರು ಭಾಗವಹಿಸಿದರು.