
ಬೆಳಗಾವಿ: ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆಯೊಂದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು ಇದೀಗ ಈ ಕುರಿತು ಸ್ಪಷ್ಟನೆ ನೀಡಿದ ಅವರು ತಂದೆಯವರು( ಸಿಎಂ ಸಿದ್ದರಾಮಯ್ಯ) ಸದಾ ಸಾಮಾಜಿಕ ನ್ಯಾಯ ಮತ್ತು ಜಾತ್ಯಾತೀತ ಸಿದ್ದಾಂತಗಳಲ್ಲಿ ನಂಬಿಕೆ ಇಟ್ಟುಕೊಂಡವರು. ಅದೇ ರೀತಿಯಾಗಿ ಸತೀಶ್ ಜಾರಕಿಹೊಳೆ ಕೂಡ ನಂಬಿಕೆ ಇಟ್ಟುಕೊಂಡಿದ್ದಾರೆ. ಆ ರೀತಿ ಸೈದಾಂತಿಕವಾಗಿ ರಾಜಕಾರಣ ಮಾಡುವವರನ್ನು ಲೀಡ್ ಮಾಡಲಿ ಅನ್ನುವ ಉದ್ದೇಶ ಇಟ್ಟುಕೊಂಡು ಹೇಳಿದ್ದೇನೆಯೇ ಹೊರತು ಉತ್ತರಾಧಿಕಾರಿ ಬಗ್ಗೆ ನಾನು ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪಕ್ಷದೊಳಗೆ ಯಾವುದೇ ನಾಯಕತ್ವ ಬದಲಾವಣೆ ಚರ್ಚೆ ನಡೆದಿಲ್ಲ. ಸತೀಶ್ ಜಾರಕಿಹೊಳೆ ಮುಂದಿನ ಸಿಎಂ ಆಗುತ್ತಾರೆ ಎಂಬ ಮಾತುಗಳಿಗೂ ತಾತ್ವಿಕ ಆಧಾರ ಇಲ್ಲ. ಅಂತಹ ಅರ್ಹತೆ ಹೊಂದಿರುವ ಅನೇಕ ನಾಯಕರು ಪಕ್ಷದಲ್ಲಿ ಇದ್ದಾರೆ, ಅಂತಿಮ ತೀರ್ಮಾನ ಹೈಕಮಾಂಡ್ ಕೈಯಲ್ಲಿದೆ.
ಈಗಾಗಲೇ 2028 ರ ಚುನಾವಣೆಯಲ್ಲಿ ತಂದೆಯವರು ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದು ಅದರ ನಂತರವೂ ಕಾಂಗ್ರೆಸ್ ನ ಜಾತ್ಯತೀತ ಸಿದ್ದಾಂತವನ್ನು ಮುಂದುವರಿಸುವ ಅನೇಕ ರಾಜಕಾರಣಿಗಳು ನಮ್ಮೊಂದಿಗಿದ್ದಾರೆ. ಅವರನ್ನೆಲ್ಲ ಸತೀಶ್ ಜಾರಕಿಹೊಳೆ ಮುನ್ನಡೆಸಲಿ ಎಂಬುದು ನನ್ನ ಆಶಯ ಎಂದು ಹೇಳಿದ್ದಾರೆ.



















































