30.9 C
Udupi
Wednesday, February 4, 2026
spot_img
spot_img
HomeBlogಮೆಡಿಕಲ್ ಶಾಪ್ ನ ದಲಿತ ಯುವತಿಗೆ ಚಿಲ್ಲರೆ ವಿಚಾರವಾಗಿ ಹಲ್ಲೆ ಮಾಡಿದ ಮುಸ್ಲಿಂ ಮಹಿಳೆ: ಜಾತಿನಿಂದನೆಯಡಿ...

ಮೆಡಿಕಲ್ ಶಾಪ್ ನ ದಲಿತ ಯುವತಿಗೆ ಚಿಲ್ಲರೆ ವಿಚಾರವಾಗಿ ಹಲ್ಲೆ ಮಾಡಿದ ಮುಸ್ಲಿಂ ಮಹಿಳೆ: ಜಾತಿನಿಂದನೆಯಡಿ ದೂರು ದಾಖಲು

ಕುಂದಾಪುರ: ಸೋಮವಾರ ತಾಲೂಕಿನ ಮಾವಿನ ಕಟ್ಟೆಯ ಮೆಡಿಕಲ್ ಶಾಪ್ ನ ಲಕ್ಷ್ಮಿ ಎಂಬ ದಲಿತ ಯುವತಿಗೆ ಯಾಸ್ಮಿನ್ ಎಂಬ ಮುಸ್ಲಿಂ ಮಹಿಳೆಯೊಬ್ಬರು ಚಿಲ್ಲರೆ ವಿಚಾರವಾಗಿ ಹಲ್ಲೆಗೈದ ಘಟನೆ ನಡೆದಿದೆ.

ಮಾವಿನ ಕಟ್ಟೆಯ ಮೆಡಿಕಲ್ ಗೆ ಬಂದಿದ್ದ ಯಾಸ್ಮಿನ್ ಔಷಧ ಖರೀದಿಸಿ 500 ರೂಪಾಯಿ ಕೊಟ್ಟಿದ್ದು ಬಳಿಕ ಚಿಲ್ಲರೆ ಕೊಡಿ ಎಂದರೂ ಕೊಟ್ಟಿರಲಿಲ್ಲ. ಈ ವಿಚಾರವಾಗಿ ಲಕ್ಷ್ಮಿ ಜೊತೆ ಜಗಳ ಮಾಡಿದ ಯಾಸ್ಮಿನ್ ಆ ಮಹಿಳೆಯ ಮೇಲೆ ಹಲ್ಲೆ ನಡೆಸಿ ಅವಾಚ್ಯವಾಗಿ ಜಾತಿನಿಂದನೆ ಮಾಡಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಹಲ್ಲೆಗೊಳಗಾದ ಲಕ್ಷ್ಮಿ ಅವರನ್ನು ಕುಂದಾಪುರದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ಘಟನೆ ಕುರಿತು ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಯಲಿದ್ದು ಆರೋಗ್ಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page