
ಕಾರ್ಕಳ: ಏಪ್ರಿಲ್ 7ರಂದು ತಾಲೂಕಿನ ಮುಂಡ್ಕೂರು ಗ್ರಾಮದ ರಮೇಶ್ (67) ಎಂಬವರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದಲ್ಲಿ ಇದೀಗ ಟ್ವಿಸ್ಟ್ ಸಿಕ್ಕಿದ್ದು ಅದೇನಂದರೆ ಸಚ್ಚರಿ ಪೇಟೆಯ ನ್ಯೂ ಸಾಯಿ ಕೃಪಾ ಹೋಟೆಲ್ ಮಾಲೀಕ ಸುರೇಶ್ ಎಂಬಾತನಿಂದ ಆಗಿರುವ ಅವಮಾನಕ್ಕೆ ನೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಡೆತ್ ನೋಟ್ ಬರೆದಿಟ್ಟಿದ್ದರು ಎನ್ನುವ ಆಧಾರದ ಮೇಲೆ ರಮೇಶ್ ಅವರ ಮಗ ಶರತ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
ಸುರೇಶ ಅವರ ಹೋಟೆಲಿನಲ್ಲಿ ರಮೇಶ್ ಅವರು ಕೆಲಸ ಮಾಡಿಕೊಂಡಿದ್ದು ತಾನು ದುಡಿದ ಸಂಬಳ ನೀಡುವಂತೆ ಮಾಲೀಕರಿಗೆ ಕೇಳಿದಾಗ ಆತ ಸಂಬಳ ನೀಡದೆ ಹೋಟೆಲ್ ಗಿರಾಕಿಗಳ ಎದುರಲ್ಲಿ ಅವಾಚ್ಯವಾಗಿ ನಿಂದಿಸಿ ಹಲ್ಲೆಗೈದದ್ದರಿಂದ ಅವಮಾನಕ್ಕೊಳಗಾದ ರಮೇಶ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.






















































