
ಮಂಗಳೂರು: ಜುಲೈ 3ರಿಂದ ಕೆಎಸ್ಆರ್ಟಿಸಿ ಮಂಗಳೂರು ವಿಭಾಗದ ಎರಡನೇ ಘಟಕದಿಂದ ಮಂಗಳೂರು-ಧರ್ಮಸ್ಥಳ ಮಾರ್ಗವಾಗಿ ರಾಜಹಂಸ ಸಾರಿಗೆ ಪರಿಚಯಿಸಲಾಗಿದೆ.
ಈ ಬಸ್ಸು ಮಂಗಳೂರಿನಿಂದ ಧರ್ಮಸ್ಥಳಕ್ಕೆ ಬೆಳಗ್ಗೆ 6:30, 7, 8:30, 9, 11:15, 12:15, 02:30, 03:30 5:30 ಮತ್ತು 6:30ಕ್ಕೆ ಸಂಚರಿಸಲಿದ್ದು ಅದೇ ರೀತಿ ಧರ್ಮಸ್ಥಳದಿಂದ ಮಂಗಳೂರಿಗೆ ಬೆಳಗ್ಗೆ 6:30, 7, 9:15, 11:30, 12, 02:45, 3:30, 4:30 ಮತ್ತು 5:30ಕ್ಕೆ ಸಂಚಾರ ಮಾಡಲಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಕೆಎಸ್ಆರ್ಟಿಸಿ ಈ ಬಸ್ಸು ಬಿಸಿ ರೋಡ್, ಬಂಟ್ವಾಳ, ಕಾರಿಂಜ ಕ್ರಾಸ್, ಪುಂಜಾಲಕಟ್ಟೆ, ಮಡಂತ್ಯಾರು, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ ಮಾರ್ಗವಾಗಿ ಸಂಚರಿಸಲಿದ್ದು 110 ರೂ. ಪ್ರಯಾಣದರ ಇರಲಿದೆ ಎಂದು ಮಾಹಿತಿ ನೀಡಿದೆ.