
ಬಜಗೋಳಿ ಅಹಿಂಸಾ ಅನಿಮಲ್ ಕೇರ್ ನ ಚಿಕಿತ್ಸೆ ಪಡೆಯತ್ತಿದ್ದ ಗೋವುಗಳ ಕಳ್ಳತನ ಪ್ರಕರಣವನ್ನ ವಿಶ್ವ ಹಿಂದು ಪರಿಷದ್ ಬಜರಂಗದಳ ಖಂಡಿಸುತ್ತದೆ..
ಈ ಪ್ರಕರಣವನ್ನ ಪೋಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಕಿಡಿಕೇಡಿಗಳನ್ನು ತಕ್ಷಣ ಬಂಧಿಸಬೇಕು ಇಲ್ಲವಾದಲ್ಲಿ ಪ್ರತಿಭಟನೆಯನ್ನು ಸಂಘಟನೆ ನಡೆಸಬೇಕಾಗುತ್ತದೆ. ಉಡುಪಿ ಜಿಲ್ಲೆ ಕಾರ್ಕಳ ತಾಲೂಕಲ್ಲಿ ದನ ಕಳ್ಳತನ ವ್ಯವಸ್ಥಿತ ವಾಗಿ ಎಗ್ಗಿಲ್ಲದೆ ನಡೆಯುತ್ತಿದ್ದು ಇದು ಕೋಮು ಸಾಮರಸ್ಯವನ್ನ ಹಾಳುಮಾಡುತ್ತಿದ್ದು ಶಾಂತಿ ಕದಡುವ ಕೃತ್ಯ ವಾಗಿದ್ದು ತಕ್ಷಣ ಅರೋಪಿಗಳನ್ನ ಬಂಧಿಸಬೇಕು ಎಂದು ಪ್ರಖಂಡ ವಿಶ್ವಹಿಂದು ಪರಿಷದ್ ಗೋ ರಕ್ಷಾ ಪ್ರಮುಖ್ ಹರೀಶ್ ಶೆಟ್ಟಿ ಬೆಳ್ಮಣ್ ಬಜರಂಗದಳ ಗೋರಕ್ಷಾ ಪ್ರಮುಖ್ ಶರತ್ ಸಾಣೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ….







