19.5 C
Udupi
Saturday, December 27, 2025
spot_img
spot_img
HomeBlog"ಪರಶುರಾಮ" ಸುಳ್ಳು ಆರೋಪ ಸಾಬೀತುಪಡಿಸಲಾಗದೆ, ಕಾಂಗ್ರೆಸ್ ನದು ಪ್ರತಿಭಟನೆಯ ಬೀದಿ ನಾಟಕ

“ಪರಶುರಾಮ” ಸುಳ್ಳು ಆರೋಪ ಸಾಬೀತುಪಡಿಸಲಾಗದೆ, ಕಾಂಗ್ರೆಸ್ ನದು ಪ್ರತಿಭಟನೆಯ ಬೀದಿ ನಾಟಕ

ಜನಸ್ಪಂದನ ಸಭೆಯಲ್ಲಿ ದಾಂಧಲೆ, ತಾಲೂಕಿನ ಜನರಿಗೆ ಎಸಗಿದ ಘೋರ ಅನ್ಯಾಯ

ಚುನಾವಣೆಯ ಸೋಲು,ನೀರಿನಿಂದ ಹೊರ ತೆಗೆದ ಮೀನಿನಂತಾದ ಕಾರ್ಕಳ ಕಾಂಗ್ರೆಸ್

ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ವ್ಯಂಗ್ಯ

ಕಾರ್ಕಳ: ಯಾವ ವೇದಿಕೆಯಲ್ಲಿ ಯಾವ ವಿಚಾರ ಪ್ರಸ್ತಾಪ ಮಾಡಬೇಕೆಂಬ ಪರಿಜ್ಞಾನವಿಲ್ಲದ ಕಾರ್ಕಳ ಕಾಂಗ್ರೆಸ್, ಕಾರ್ಕಳದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ದಾಂಧಲೆ ನಡೆಸಿ ತಾಲೂಕಿನ ಜನರಿಗೆ ಘೋರ ಅನ್ಯಾಯ ಎಸಗಿದೆ. ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ನೀಡದಂತೆ ತಡೆದಿರುವುದು ಅಕ್ಷಮ್ಯ. ಕಾರ್ಕಳದ ಜನತೆ ಈ ಕಾಂಗ್ರೆಸ್ಸನ್ನು ಯಾವತ್ತಿಗೂ ಕ್ಷಮಿಸಲಾರರು ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ತಿಳಿಸಿದ್ದಾರೆ.

ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ನೀಡುವ ಸದುದ್ದೇಶವನ್ನಿಟ್ಟುಕೊಂಡು, ಮಾನ್ಯ ಜಿಲ್ಲಾಧಿಕಾರಿ ಹಾಗೂ ಮಾನ್ಯ ಶಾಸಕರ ಉಪಸ್ಥಿತಿಯಲ್ಲಿ ಜನರ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಜನಸ್ಪಂಧನಾ ಸಭೆಯಲ್ಲಿ ಕಾಂಗ್ರೆಸ್ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಂದಿರುವುದು ಕಾಂಗ್ರೆಸ್ಸಿನ ನೀಚ ಮನಸ್ಥಿತಿಯನ್ನು ಪ್ರದರ್ಶಿಸುತ್ತದೆ. ಕಾಂಗ್ರೆಸ್ಸಿಗೆ ಜನರ ಸಾಮಾನ್ಯರ ಸಮಸ್ಯೆಗಳ ಬಗ್ಗೆ ಕಾಳಜಿಯೆ ಇಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

ಅದೆಷ್ಟೋ ವರ್ಷಗಳಿಂದ ಕಾರ್ಕಳದಲ್ಲಿ ರಾಜಕೀಯ ಅಸ್ತಿತ್ವವೇ ಇಲ್ಲದೆ ಕಂಗಾಲಾಗಿರುವ ಕಾಂಗ್ರೆಸ್, ಯಾವುದೇ ಒಳ್ಳೆಯ ಯೋಚನೆ, ಯೋಜನೆಗಳಿಲ್ಲದೆ ತಾನೇ ಸೃಷ್ಟಿಸಿದ ಸುಳ್ಳು ಆರೋಪಕ್ಕೆ ಪದೇ ಪದೇ ಜೋತು ಬೀಳುತ್ತಿರುವುದು ವಿಪರ್ಯಾಸ.

ರಾಜಕೀಯ ದುರುದ್ದೇಶದಿಂದ ಪರಶುರಾಮ ಥೀಮ್ ಪಾರ್ಕ್ ವಿಚಾರವಾಗಿ ಕಾಂಗ್ರೆಸ್ ತಾನೇ ಮಾಡಿರುವ ಸುಳ್ಳು ಆರೋಪನವನ್ನು, ರಾಜ್ಯದಲ್ಲಿ ತಮ್ಮದೇ ಕಾಂಗ್ರೆಸ್ ಸರಕಾರವಿದ್ದರೂ, ಉಡುಪಿ ಜಿಲ್ಲೆಯ ಉಸ್ತುವಾರಿಯಾಗಿ ತಮ್ಮದೇ ಸಚಿವೆ ಇದ್ದರೂ, ಸುಳ್ಳು ಆರೋಪವನ್ನು ಸಾಬೀತು ಮಾಡಲಾಗದ ಕಾರ್ಕಳ ಕಾಂಗ್ರೆಸ್ ತನ್ನ ಮಾನ ಉಳಿಸಿಕೊಳ್ಳಲು ಪ್ರತಿಭಟನೆ ಹೋರಾಟಗಳ ಬೀದಿನಾಟಕ ಮಾಡುತ್ತಿರುವುದು ಕಾರ್ಕಳದ ಜನತೆಗೆ ಈಗಾಗಲೇ ಅರ್ಥವಾಗಿದೆ.

ಕಾಮಾಲೆ ಕಣ್ಣಿಗೆ ಇಡೀ ಪ್ರಪಂಚವೇ ಹಳದಿಯಾಗಿ ಕಾಣಿಸುವಂತೆ ಶುಭೋದ್ ರಾವ್ ಗೆ ಎಲ್ಲರೂ ತನ್ನಂತೆಯೇ ಎಂಬ ಭಾವನೆ ಇದೆ. ತಹಶೀಲ್ದಾರರಿಂದ ಶಾಸಕರು ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪ ಮಾಡುತ್ತಿರುವ ಕಾಮಾಲೆ ಕಣ್ಣಿನ ಶುಭೋದ್ ರಾವ್, ತಾಕತ್ತಿದ್ದರೆ ಆ ತಹಶೀಲ್ದಾರ್ ಯಾರು ಎಂದು ಹೆಸರನ್ನು ಬಹಿರಂಗಪಡಿಸಲಿ ಹಾಗೂ ಅದನ್ನು ಸಾಬೀತುಪಡಿಸಲಿ.

ಕಾಂಗ್ರೆಸ್ ತನ್ನ ಇಂತಹ ಜನ ವಿರೋಧಿ ಕೃತ್ಯಗಳಿಂದ, ಸುಳ್ಳು ಹೇಳಿಕೆಗಳಿಂದ ಜನರ ಮನಸ್ಸಿನಲ್ಲಿ ಇನ್ನಷ್ಟು ಕೀಳು ಮಟ್ಟಕ್ಕೆ ಇಳಿಯಲಿದೆ.

ಕಳೆದ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ನೀರಿನಿಂದ ಹೊರ ತೆಗೆದ ಮೀನಿನಂತಾಗಿರುವಾಗ ಕಾರ್ಕಳ ಕಾಂಗ್ರೆಸ್,
ಕಾರ್ಕಳದಲ್ಲಿ ಕಾಂಗ್ರೆಸ್ ಅಧಿಕಾರವಿಲ್ಲದಿದ್ದರೂ ರಾಜ್ಯ ಸರಕಾರದ ಹೆಸರು ಹೇಳಿಕೊಂಡು ಕಾರ್ಕಳದಲ್ಲಿ ಹಿಡಿತ ಸಾಧಿಸುವ ಪ್ರಯತ್ನ ಮಾಡುತ್ತಿದೆ. ಕಾರ್ಕಳ ಕಾಂಗ್ರೆಸ್ ತನ್ನ ಗೂಂಡಾ ವರ್ತನೆಯನ್ನು ತೋರುತ್ತಿರುವುದು ಜನ ಸಾಮಾನ್ಯರ ಮೇಲೆ ಮಾತ್ರವಲ್ಲ, ಒಂದೆಡೆ ವರ್ಗಾವಣೆ ಮಾಡುವುದಾಗಿ ಅಧಿಕಾರಿಗಳಿಗೆ ಕಿರುಕುಳ ನೀಡಿ ಬೆದರಿಸಿ, ಅಧಿಕಾರಿಗಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದೆ, ಮತ್ತೊಂದೆಡೆ ಬಿಜೆಪಿ ಕಾರ್ಯಕರ್ತರನ್ನು ವೈಯಕ್ತಿಕವಾಗಿ ಗುರಿಯಾಗಿಸಿ ಕಾರ್ಯಕರ್ತರ ವ್ಯಾಪಾರ ಉದ್ಯಮಗಳಿಗೆ ನಿರಂತರ ತೊಂದರೆಗಳನ್ನು ನೀಡುತ್ತಾ ಕಾರ್ಕಳದಲ್ಲಿ ಕಾಂಗ್ರೆಸ್ ತನ್ನ ಗೂಂಡಾ ರಾಜ್ಯ ಸ್ಥಾಪಿಸಲು ಹೊರಟಿರುವುದು ಆಘಾತಕಾರಿ ಹಾಗೂ ಬಹಳ ಆತಂಕಕಾರಿ ವಿಚಾರ.ಕಾರ್ಕಳ ಕಾಂಗ್ರೆಸ್ಸಿನ ಜನವಿರೋಧಿ ನಡೆಯನ್ನು ಹಾಗೂ ಗೂಂಡಾ ವರ್ತನೆಯನ್ನು ಕಾರ್ಕಳ ಬಿಜೆಪಿ ಬಲವಾಗಿ ಖಂಡಿಸುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page