ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ

ಅಕ್ಟೋಬರ್ 18ಕ್ಕೆ ಗುರು ತನ್ನ ಉಚ್ಛಾರಾಶಿ ಪ್ರವೇಶ ಮಾಡುತ್ತಾನೆ. ಒಂದು ಅಧಿಕಾರ ಪ್ರಾಪ್ತಿಯ ಕಾಲದ ಗ್ರಹ ಸ್ಥಿತಿಯು ಜಾತಕದ ಗ್ರಹ ಸ್ಥಿತಿಗೆ ಹೇಗಿರಬೇಕು ಎಂಬುದನ್ನು ತಿಳಿಸುತ್ತಿದ್ದೇನೆ ಹೊರತು ಯಾರದ್ದು, ಯಾರಿಗೆ ,ಯಾವ ಅಧಿಕಾರ ಎಂಬ ವಿಚಾರವಲ್ಲ ಎನ್ನುವ ಮೂಲಕ ನವೆಂಬರ್ 28ರ ನಂತರ ರಾಜ್ಯದ ಆಡಳಿತದಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎಂದು ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಯ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಭವಿಷ್ಯ ನುಡಿದಿದ್ದಾರೆ.
ಇದೀಗಲೇ ಬಿಜೆಪಿ ನವೆಂಬರ್ ನಲ್ಲಿ, ರಾಜ್ಯದ ಆಡಳಿತದಲ್ಲಿ ಕ್ರಾಂತಿಯಾಗಲಿದೆ, ರಾಜ್ಯದ ಮುಖ್ಯಮಂತ್ರಿ ಸ್ಥಾನ ಬದಲಾವಣೆಯಾಗುತ್ತೆ ಎನ್ನುತ್ತಾ ಬರುತ್ತಿದೆ. ಸಿಎಂ ಸಿದ್ದರಾಮಯ್ಯರವರ ಜಾಗಕ್ಕೆ ಡಿಕೆ ಶಿವಕುಮಾರ್ ಬರುತ್ತಾರೆ ಅಥವಾ ಬೇರೆ ಯಾರಾದರೂ ಬರುತ್ತಾರೆ ಎಂಬ ಚರ್ಚೆ ನಡೆಯುತ್ತಿದ್ದು, ಜ್ಯೋತಿಷಿ ಪ್ರಕಾಶ್ ಭವಿಷ್ಯ ಚರ್ಚೆಯ ವಿಷಯವಾಗಿದೆ.
ಜಾತಕದಲ್ಲಿ ಗುರು ನೀಚನಿದ್ದು ಗೋಚಾರದಲ್ಲಿ ಉಚ್ಚರಾಶಿಗೆ ಬರುವ ಕಾಲ. ಹೆಚ್ಚು ಕಡಿಮೆ ಅಧಿಕಾರ ಸಿಗಲೇಬೇಕು. ಆದರೆ ಅಧಿಕಾರ ಪಡೆಯುವಲ್ಲಿ ದೋಷಗಳಿದ್ದರೆ, ಪರಿಹಾರ ಮಾಡಿಕೊಳ್ಳಲೇಬೇಕು ಇಲ್ಲದಿದ್ದರೆ ಅಧಿಕಾರ ಲಭಿಸದು ಎಂದು ತಿಳಿಸಿದ್ದಾರೆ.






















































